Advertisement

ಹೊನ್ನಾವರದಲ್ಲಿ 12 ಸೆಂ.ಮೀ.ಮಳೆ

11:04 PM Sep 01, 2019 | Team Udayavani |

ಬೆಂಗಳೂರು/ಮಂಗಳೂರು: ಭಾನುವಾರ ಮುಂಜಾನೆ 8.30ಕ್ಕೆ ಅಂತ್ಯಗೊಂಡ 24 ತಾಸುಗಳ ಅವಧಿಯಲ್ಲಿ ರಾಜ್ಯದ ಕರಾವಳಿ ಮತ್ತು ಉತ್ತರ ಒಳನಾಡಿನ ಹಲವೆಡೆ ಹಾಗೂ ದಕ್ಷಿಣ ಒಳನಾಡಿನ ಕೆಲವೆಡೆ ಸಾಧಾರಣ ಮಳೆಯಾಯಿತು. ಹೊನ್ನಾವರದಲ್ಲಿ ರಾಜ್ಯದಲ್ಲಿಯೇ ಅಧಿಕವೆನಿಸಿದ 12 ಸೆಂ.ಮೀ. ಮಳೆ ಸುರಿಯಿತು.

Advertisement

ಉಡುಪಿ ಜಿಲ್ಲೆಯಾದ್ಯಂತ ಭಾನುವಾರ ನಿರಂತರ ಮಳೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದ ಬಿ.ಸಿ.ರೋಡ್‌ ಭಂಡಾರಿಬೆಟ್ಟು ಪರಿಸರದಲ್ಲಿ ಸಿಡಿಲು ಬಡಿದು ಕೆಲವು ಮನೆ, ತೆಂಗಿನ ಮರ, ಬಾಳೆಗಿಡಗಳಿಗೆ ತೀವ್ರ ಹಾನಿಯಾಗಿದೆ. ಸಿಡಿಲಿನ ಹೊಡೆತದಿಂದ ವಿದ್ಯುತ್‌ ಮೀಟರ್‌, ಸ್ವಿಚ್‌ ಬೋರ್ಡ್‌, ಬಲ್ಬ್, ಟಿವಿ, ಪ್ರಿಜ್‌ ಸಹಿತ ಹಲವು ಉಪಕರಣಗಳು ಕೆಟ್ಟು ಹೋಗಿವೆ.

ಮಂಕಿಯಲ್ಲಿ 11, ಶಿರಾಲಿ, ಗೇರುಸೊಪ್ಪಾಗಳಲ್ಲಿ ತಲಾ 10, ಕುಂದಾಪುರದಲ್ಲಿ 9, ಅಂಕೋಲಾ, ಕುಮಟಾ, ಗೋಕರ್ಣ, ಕಾರವಾರಗಳಲ್ಲಿ ತಲಾ 7 ಸೆಂ.ಮೀ. ಮಳೆಯಾದ ವರದಿಯಾಗಿದೆ. ಮಂಗಳವಾರ ಮುಂಜಾನೆವ ರೆಗಿನ ಹವಾಮಾನ ಮುನ್ಸೂಚನೆಯಂತೆ ಕರಾವಳಿಯ ಎಲ್ಲೆಡೆ ಹಾಗೂ ಒಳನಾಡಿನ ಹಲವೆಡೆ ಉತ್ತಮ ಮಳೆಯಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next