Advertisement

ಯಮಕನಮರಡಿ : ಹುಕ್ಕೇರಿ ತಾಲೂಕಿನ ಶಿಂದಿಹಟ್ಟಿ ಗ್ರಾಮದ ಹೊರವಲಯದ ಹೊಲದಲ್ಲಿ ಮಂಗಳವಾರ ಸಂಜೆ ವಿಷಾಹಾರ ಸೇವಿಸಿ 11ಕುರಿಗಳು ಮೃತಪಟ್ಟಿವೆ.

Advertisement

ಶಿಂದಿ ಹಟ್ಟಿ ಗ್ರಾಮದ ಸಿಂಗಾಡಿ ಸಿದ್ಧಗೌಡ ಪೂಜೇರಿಯವರಿಗೆ ಸೇರಿದ 4ಕುರಿಗಳು ಮತ್ತು ಜಕರಾಯಿ ಭರಮಪ್ಪ ಪೂಜೇರಿಯವರಿಗೆ ಸೇರಿದ 4ಕುರಿಗಳು, ಸಿಂಗಾಡಿ ಮಾಯಪ್ಪ
ಪೂಜೇರಿಯವರಿಗೆ ಸೇರಿದ 3ಕುರಿಗಳು ಮೃತಪಟ್ಟಿವೆ ಎಂದು ಪಶು ವೈದ್ಯಾಧಿಕಾರಿ ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಪಶು ಇಲಾಖೆ ಸಹಾಯಕ ನಿರ್ದೇಶಕ ತ್ಯಾತ್ಯಾಸಾಹೇಬ ದೇಸಾಯಿ ಮತ್ತು ಪಶು ವೈದ್ಯಾಧಿಕಾರಿ ಟಿ. ಎಚ್‌.ದೇಸಾಯಿ, ಬಸವರಾಜ ದೇಸಾಯಿ ಭೇಟಿ ನೀಡಿ ಪರಿಶೀಲನೆ
ನಡೆಸಿದರು. ಗ್ರಾಮದ ಗಣ್ಯರಾದ ನಿಂಗಪ್ಪ ಪೂಜೇರಿ, ವಿಠಲ ಪೂಜೇರಿ, ಸುಪ್ಪ ಹಂಜಿ ಉಪಸ್ಥಿತರಿದ್ದರು.

ಇದನ್ನೂ ಓದಿ : ಪಾಲಿಕೆ ಜಾಗ ಪರಭಾರೆ ಸಲ್ಲ : ಆಯುಕ್ತರಿಗೆ ಅಣ್ಣಾ ಹಜಾರೆ ಹೋರಾಟ ಸಮಿತಿ ಮನವಿ

Advertisement

Udayavani is now on Telegram. Click here to join our channel and stay updated with the latest news.

Next