Advertisement

ಕ್ವಾರಂಟೈನ್‌ ಕೇಂದ್ರದಲ್ಲಿನ 11 ಜನರ ಗಂಟಲು ದ್ರವ ಸಂಗ್ರಹ

05:58 AM May 25, 2020 | Suhan S |

ವಿಜಯಪುರ: ತಿಕೋಟಾ ತಾಲೂಕಿನ ಕಳ್ಳಕವಟಗಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ತೆರೆಯಲಾಗಿರುವ ಸಾಂಸ್ಥಿಕ ಕ್ವಾರಂಟೈನ್‌ ಕೇಂದ್ರದಲ್ಲಿರುವರಲ್ಲಿ 11 ಜನರ ಗಂಟಲು ದ್ರವ ಸಂಗ್ರಹಿಸಿ, ಪ್ರಯೋಗಾಲಯಕ್ಕೆ ಕಳಿಸಲಾಯಿತು.

Advertisement

ಆರೋಗ್ಯ ಇಲಾಖೆ ಪ್ರಯೋಗಾಲಯದ ತಾಂತ್ರಿಕ ಸಿಬ್ಬಂದಿ ಗ್ರಾಮದ ಕ್ವಾರಂಟೈನ ಕೇಂದ್ರಕ್ಕೆ ತೆರಳಿ ಕ್ವಾರಂಟೈನ್‌ ಕೇಂದ್ರದಲ್ಲಿ ಜಿಲ್ಲಾಡಳಿತದ ನಿಗಾದಲ್ಲಿರುವ ಇಬ್ಬರು ಮಕ್ಕಳು, ಒಬ್ಬಳು ಗರ್ಭಿಣಿ, ಆರು ಜನ ಯುವತಿಯರು ಸೇರಿದಂತೆ 11 ಜನರ ಗಂಟಲು ದ್ರವ ಸಂಗ್ರಹಿಸಿದರು. ಕ್ವಾರಂಟೈನ್‌ಗೆ ಒಳಪಟ್ಟ ಎಲ್ಲರಿಗೂ ಸಾಮಾಜಿಕ ಅಂತರ ಕಾಪಾಡಿ, ಮಾಸ್ಕ್ ಹಾಗೂ ಸಾನಿಟೈಜರ್‌ ಬಳಕೆ ಮಾಡಬೇಕು. ಸ್ನಾನ ಮಾಡಲು ತೆರಳಿದಾಗ ನಳಕ್ಕೆ ಕಡ್ಡಾಯವಾಗಿ ಸೈನಿಟೈಜರ್‌ ಹಚ್ಚಬೇಕು. ಒಂದೇ ಕುಟುಂಬದ ಸದಸ್ಯರು ಇದ್ದರೂ ಆರೋಗ್ಯ ಇಲಾಖೆಯ ಎಲ್ಲ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಜ್ವರ, ಕೆಮ್ಮು, ಶೀತದಂಥ ರೋಗ ಲಕ್ಷಗಳು ಕಂಡು ಬಂದಲ್ಲಿ ತಕ್ಷಣವೇ ಕ್ವಾರಂಟೈನ್‌ ಕೇಂದ್ರದ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಗರ್ಭಿಣಿಯರು, ಮಕ್ಕಳಿಗೆ ಯಾವುದೇ ಆರೋಗ್ಯದ ಸಮಸ್ಯೆ ಕಂಡು ಬಂದಲ್ಲಿ ನಿರ್ಲಕ್ಷ ಮಾಡದೇ ಮೇಲಧಿ ಕಾರಿಗಳ ಗಮನಕ್ಕೆ ತರಬೇಕು ಎಂದು ಘೋಣಸಗಿ ಸಮುದಾಯ ಆರೋಗ್ಯ ಕೇಂದ್ರದ ಅಧಿಕಾರಿ ಜಮಾಲುದ್ದಿನ ಮುಲ್ಲಾ ಸೂಚಿಸಿದರು.

ಕ್ವಾರಂಟೈನ್‌ ಕೇಂದ್ರದಲ್ಲಿರುವವರು ಗ್ರಾಮದಲ್ಲೇ ಮನೆ ಇದ್ದರೂ ಯಾವದೇ ಆಹಾರ ತರಿಸಿಕೊಳ್ಳುವಂತಿಲ್ಲ. ಬದಲಾಗಿ ಕ್ವಾರಂಟೈನ್‌ ಕೇಂದ್ರದಲ್ಲಿರುವ ಗುಣಮಟ್ಟದ ಆಹಾರ ಹಾಗೂ ಇತರೆ ಸೌಲಭ್ಯಗಳನ್ನೇ ಬಳಸಬೇಕು ಎಂದು ಸೂಚಿಸಿದರು.

ಹಿರಿಯ ಆರೋಗ್ಯ ಸಹಾಯಕ ಎಸ್‌.ಆರ್‌. ಉಪ್ಪಾರ, ಪ್ರಯೋಗಾಲಯ ತಂತ್ರಜ್ಞರು ಎಂ.ಬಿ.ಜನಗಿಂಡ, ಎಚ್‌.ಬಿ.ಬಡಿಗೇರ, ಆಶಾ ಕಾರ್ಯಕರ್ತೆ ಅಶ್ವಿ‌àನಿ ಗಿಡ್ನವರ್‌, ಸಂಗೀತಾ ವಾಲಿಕಾರ ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next