Advertisement

ಅಂಬಿ ಅಗಲಿ 11 ದಿನ: 50ಕ್ಕೂ ಹೆಚ್ಚು ಅಭಿಮಾನಿಗಳಿಂದ ಕೇಶಮುಂಡನ

10:00 AM Dec 04, 2018 | Team Udayavani |

ಬೆಂಗಳೂರು: ರೆಬೆಲ್‌ಸ್ಟಾರ್‌ ಅಂಬರೀಷ್‌ ಅವರು ಅಗಲಿ ಇಂದು ಮಂಗಳವಾರ 11 ದಿನಗಳಾಗಿದ್ದು ಕುಟುಂಬಸ್ಥರು ಸೂತಕ ಕಳೆದುಕೊಳ್ಳುವ ಶಾಸ್ತ್ರ ಆಚರಿಸಿದ್ದು, ಬೆಳಗ್ಗೆ ಕಂಠೀರವ ಸ್ಟುಡಿಯೋದಲ್ಲಿರುವ ಸಮಾಧಿಗೆ ತೆರಳಿ ಹಾಲು, ತುಪ್ಪ ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

Advertisement

ಪತ್ನಿ ಸುಮಲತಾ ಮತ್ತು ಪುತ್ರ ಅಭಿಷೇಕ್‌ ಅವರೊಂದಿಗೆ ನಟ ದರ್ಶನ್‌, ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಸೇರಿದಂತೆ ಹಲವು ಗಣ್ಯರು ಆಗಮಿಸಿ ಪೂಜೆ ಸಲ್ಲಿಸಿದರು. 

ನೂರಾರು ಅಭಿಮಾನಿಗಳು ಸಮಾಧಿ ಬಳಿ ಆಗಮಿಸಿದ್ದು ನೆಚ್ಚಿನ ನಾಯಕನಿಗೆ ನಮನ ಸಲ್ಲಿಸಿದರು. 

ಮಂಡ್ಯ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ 50 ಕ್ಕೂ ಹೆಚ್ಚು ಮಂದಿ ಕೇಶ ಮುಂಡನ ಮಾಡಿಕೊಂಡು ಅಭಿಮಾನ ಮೆರೆದರು. 

Advertisement

ಈ ವೇಳೆ ಕುಟುಂಬಸ್ಥರು ಸಮಾಧಿಗೆ ಅರ್ಪಿಸಿದ ಪ್ರಸಾದವನ್ನು ಅಭಿಮಾನಿಗಳಿಗೆ ವಿತರಿಸಿದರು. 

ಭದ್ರತೆಗಾಗಿ 300ಕ್ಕೂ ಹೆಚ್ಚು ಪೊಲೀಸರನ್ನು ಸಮಾಧಿ ಬಳಿ ನಿಯೋಜಿಸಲಾಗಿದೆ.

ನಾಳೆ ವೈಕುಂಠ ಸಮಾರಾಧನೆ ನಡೆಯಲಿದೆ ಎಂದು ತಿಳಿದು ಬಂದಿದೆ. 

Advertisement

Udayavani is now on Telegram. Click here to join our channel and stay updated with the latest news.

Next