Advertisement

ಸಿಎಂ ಪರಿಹಾರ ನಿಧಿಗೆ 11 ಕೋಟಿ ರೂ. ದೇಣಿಗೆ

11:41 PM Aug 16, 2019 | Team Udayavani |

ಬೆಂಗಳೂರು: ಪ್ರವಾಹ ಪೀಡಿತರಿಗೆ ನೆರವು ಕಲ್ಪಿಸಲು ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ ಸಂಘ-ಸಂಸ್ಥೆಗಳು, ಸರ್ಕಾರಿ ಇಲಾಖೆ, ನಿಗಮ-ಮಂಡಳಿಗಳಿಂದ ದೇಣಿಗೆ ಹರಿದು ಬರುತ್ತಿದ್ದು, ಶುಕ್ರವಾರ 7.17 ಕೋಟಿ ರೂ.ಸಂಗ್ರಹ ವಾಗಿದೆ. ಇದಲ್ಲದೆ ಮುಖ್ಯಮಂತ್ರಿಯವರ ಪರಿಹಾರ ನಿಧಿ ಶಾಖೆಯಲ್ಲಿ 3,02,90.571 ರೂ.ಮೊತ್ತದ ಡಿಡಿಗಳನ್ನು ಸ್ವೀಕರಿಸಲಾಗಿದೆ.

Advertisement

ಇದರೊಂದಿಗೆ ಆಗಸ್ಟ್‌ 9 ರಿಂದ ಈವರೆಗೆ 11,26,78,355 ರೂ. ಜಮೆಯಾಗಿದೆ ಎಂದು ಮುಖ್ಯ ಮಂತ್ರಿಯವರ ಕಚೇರಿ ಪ್ರಕಟಣೆ ತಿಳಿಸಿದೆ. ಮುಖ್ಯ ಮಂತ್ರಿಯವರ ಪರಿಹಾರ ನಿಧಿಗೆ ಆನ್‌ಲೈನ್‌ ಮೂಲಕವೂ ದೇಣಿಗೆ ಪಾವತಿಸಬಹುದು. https://cmrf.karn ataka.gov.in. ಅಥವಾ bhim upi app ಮೂಲಕವೂ ದೇಣಿಗೆ ನೀಡಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next