Advertisement

107 ಶಾಸಕರು ಬಿಜೆಪಿಗೆ?

12:09 AM Jul 14, 2019 | mahesh |

ಕೋಲ್ಕತಾ: ಕರ್ನಾಟಕ ಹಾಗೂ ಗೋವಾದ ಬಳಿಕ ಈಗ ಪಶ್ಚಿಮ ಬಂಗಾಲದಲ್ಲಿ ಆಪರೇಷನ್‌ ಕಮಲದ ಭೀತಿ ಶುರುವಾಗಿದೆ. ಸದ್ಯದಲ್ಲೇ ಕಾಂಗ್ರೆಸ್‌, ಟಿಎಂಸಿ ಹಾಗೂ ಸಿಪಿಎಂನ‌ 107 ಶಾಸಕರು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂದು ಪಕ್ಷದ ನಾಯಕ ಮುಕುಲ್‌ ರಾಯ್‌ ಘೋಷಿಸಿದ್ದಾರೆ. ಕರ್ನಾಟಕದ ರಾಜಕೀಯ ಬಿಕ್ಕಟ್ಟು ಹಾಗೂ ಗೋವಾದ ಬೆಳವಣಿಗೆಗಳ ನಡುವೆಯೇ ರಾಯ್‌ ನೀಡಿರುವ ಈ ಹೇಳಿಕೆ ವಿಪಕ್ಷಗಳಲ್ಲಿ ನಡುಕ ಹುಟ್ಟಿಸಿದೆ. ನಾವು ಈಗಾಗಲೇ ಪಟ್ಟಿ ತಯಾರಿಸಿದ್ದೇವೆ. ಎಲ್ಲ 107 ಶಾಸಕರೂ ನಮ್ಮ ಸಂಪರ್ಕದಲ್ಲಿದ್ದಾರೆ ಎಂದೂ ತಿಳಿಸಿದ್ದಾರೆ. ಆದರೆ, ಯಾವಾಗ ಈ ಶಾಸಕರು ಬಿಜೆಪಿ ಸೇರುತ್ತಾರೆ ಎಂಬ ಮಾಹಿತಿ ನೀಡಿಲ್ಲ. ಇತ್ತೀಚೆ ಗಷ್ಟೇ ಮೂವರು ಶಾಸಕರು ಹಾಗೂ ಟಿಎಂಸಿಯ 50 ಕೌನ್ಸಿಲರ್‌ಗಳು ಬಿಜೆಪಿಗೆ ಸೇರಿದ್ದರು. 3 ದಿನಗಳ ಹಿಂದಷ್ಟೇ ಗೋವಾದಲ್ಲಿ 10 ಕಾಂಗ್ರೆಸ್‌ ಶಾಸಕರು ಬಿಜೆಪಿಗೆ ಸೇರ್ಪಡೆಗೊಂಡರೆ, ಕರ್ನಾಟಕದಲ್ಲಿ ಕಾಂಗ್ರೆಸ್‌-ಜೆಡಿಎಸ್‌ನ 16 ಶಾಸಕರು ರಾಜೀನಾಮೆ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next