Advertisement

ಜಲ ಸಂರಕ್ಷಣೆಗೆ 100 ದಿನದ ಅಭಿಯಾನ : ಸಚಿವ ಈಶ್ವರಪ್ಪ

12:34 AM Apr 08, 2021 | Team Udayavani |

ಮಂಗಳೂರು : ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಜಲಸಂರಕ್ಷಣೆಗೆ ಆದ್ಯತೆ ನೀಡುವ ಉದ್ದೇಶದಿಂದ 100 ದಿನದವರೆಗೆ ಜಲಶಕ್ತಿ ಅಭಿಯಾನ ನಡೆಯಲಿದೆ. ಎ. 9ರಂದು ಹುಬ್ಬಳ್ಳಿಯಲ್ಲಿ ಅಭಿಯಾನಕ್ಕೆ ಚಾಲನೆ ನೀಡಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ ತಿಳಿಸಿದರು.

Advertisement

ದ.ಕ. ಜಿಲ್ಲಾ ಪಂಚಾಯತ್‌ನಲ್ಲಿ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಲಶಕ್ತಿ ಅಭಿಯಾನದ ಅಡಿಯಲ್ಲಿ ನರೇಗಾ ಯೋಜನೆಯಲ್ಲಿ ಸಮಗ್ರ ಕೆರೆ ಅಭಿವೃದ್ಧಿ, ಕೆರೆಗೆ ನೀರು ಹರಿದು ಬರುವ ಕಾಲುವೆಗಳ ಪುನಶ್ಚೇತನ, ಹೂಳು ತೆಗೆಯುವುದು, ಕೆರೆ ಏರಿ ದುರಸ್ತಿ, ಕೆರೆ ಅಂಚಿನ ಖಾಲಿ ಪ್ರದೇಶದಲ್ಲಿ ಸಸಿ ಬೆಳೆಸುವುದು, ಬದು ನಿರ್ಮಾಣ ಅಭಿಯಾನ, ಪ್ರತೀ ಗ್ರಾ.ಪಂ. ವ್ಯಾಪ್ತಿಯಲ್ಲಿ ಕಲ್ಯಾಣಿ/ನಾಲೆ ಪುನಶ್ಚೇತನ, ಗೋ ಕಟ್ಟೆಗಳ ನಿರ್ಮಾಣ, ಕೆರೆ ನಿರ್ಮಾಣ, ಸೋಕ್‌ ಪಿಟ್‌ ನಿರ್ಮಾಣ, ಮಲ್ಟಿ ಆರ್ಚ್‌ ಚೆಕ್‌ ಡ್ಯಾಂ, ಬೋರ್‌ವೆಲ್‌ ರಿಚಾರ್ಜ್‌, ಮಳೆ ನೀರು ಕೊçಲು, ಅರಣ್ಯೀಕರಣ ಕಾಮಗಾರಿ, ಚೆಕ್‌ ಡ್ಯಾಂಗಳ ಹೂಳು ತೆಗೆಯುವುದು ಹಾಗೂ ಜಲ ಸಂರಕ್ಷಣೆ ಕಾಮಗಾರಿ ದುರಸ್ತಿ ಮಾಡಲು ಅವಕಾಶವಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next