Advertisement

ಅಪಾಯಕ್ಕೆ ಸಿಲುಕಿದ ಮೀನುಗಾರಿಕಾ ದೋಣಿಯಿಂದ 10 ಮಂದಿ ರಕ್ಷಣೆ

06:58 PM May 27, 2021 | Team Udayavani |

ಪಣಂಬೂರು : ಆಳ ಸಮುದ್ರ ಮೀನುಗಾರಿಕೆಯಲ್ಲಿ ತೊಡಗಿದ್ದ ವೇಳೆ ತಾಂತ್ರಿಕ ವೈಫಲ್ಯದಿಂದ ಅಪಾಯಕ್ಕೆ ಸಿಲುಕಿದ್ದ ತಮಿಳುನಾಡು ನೋಂದಣಿ ಹೊಂದಿದ್ದ ಲಾರ್ಡ್ ಆಫ್ ಓಷಿಯನ್ ಮೀನುಗಾರಿಕಾ ದೋಣಿಯಿಂದ 10 ಮಂದಿ ಮೀನುಗಾರರನ್ನು ಕರ್ನಾಟಕ ಕೋಸ್ಟ್ಗಾರ್ಡ್ ರಕ್ಷಿಸಿ ಸುರಕ್ಷಿತವಾಗಿ ಕರೆತಂದಿದೆ.

Advertisement

7 ಮಂದಿ ತ.ನಾ ಹಾಗೂ ೩ ಮಂದಿ ಕೇರಳದ ಮೀನುಗಾರರಾಗಿದ್ದಾರೆ.ಸ್ಟೀಫನ್ (45), ನೆಪೋಲಿಯನ್ ( 60) ಪ್ರಭು (38), ಸಾಜಿ (41), ರಾಜಿ (38), ಸಾಗರಾಜಿ (50) ಜಾರ್ಜ್ ಬುಷ್(50), ಕ್ರಿಸ್ಪಿನ್( 38), ಸಜನ್ (26), ಡೊನಿಯೊ( 38)ರಕ್ಷಿತ ಮೀನುಗಾರರಾಗಿದ್ದಾರೆ.

ಮಂಗಳೂರು ಬಂದರಿನಿಂದ 20 ನಾ.ಮೈ (37 ಕಿ.ಮೀ)ದೂರದಲ್ಲಿ ಮೀನುಗಾರಿಕೆಯಲ್ಲಿ ನಿರತವಾಗಿದ್ದಾಗ ದೋಣಿಯ ಎಂಜಿನಿ ವೈಫಲ್ಯಕ್ಕೀಡಾಯಿತು. ಮೀನುಗಾರರು ಕಳಿಸಿದ ಅಪಾಯದ ಸಂದೇಶವನ್ನು ಪಡೆದ ಕೋಸ್ಟ್ಗಾರ್ಡ್ನ ರಾಜ್‌ದೂತ್ ಕಣ್ಗಾವಲು ಹಡಗು ಎನ್‌ಎಂಪಿಟಿಯಿಂದ ಕಾರ್ಯಾಚರಣೆ ನಡೆಸಿತಲ್ಲದೆ ದೋಣಿ ಸಹಿತ ೧೦ ಮಂದಿಯನ್ನು ಹಳೆ ಬಂದರಿಗೆ ತಲುಪಿಸಿತು.ಕಳೆದ ತೌಖ್ತೆ ಚಂಡಮಾರುತದ ಸಂದರ್ಭ ಈ ದೋಣಿ ಪೋರ್‌ಬಂದರಿನಲ್ಲಿ ಲಂಗರು ಹಾಕಿತ್ತು.

ಬಳಿಕ ಮತ್ತೆ ಮೀನುಗಾರಿಕೆಗೆ ತೆರಳಿತ್ತು. ಸ್ಥಳೀಯ ಆಲ್ ಬದ್ರಿಯಾ ಮೀನುಗಾರಿಕಾ ದೋಣಿ ಕೆಟ್ಟು ಹೋದ ದೋಣಿಯನ್ನು ಎಳೆದು ತರುವಲ್ಲಿ ನೆರವು ನೀಡಿತು.

Advertisement

Udayavani is now on Telegram. Click here to join our channel and stay updated with the latest news.

Next