Advertisement

ಮಂಡ್ಯ; ಭೀಕರ ಅಪಘಾತಕ್ಕೆ 13 ಸಾವು

06:20 AM Oct 30, 2017 | Team Udayavani |

ಮದ್ದೂರು: ಮದುವೆಗೆ ಹೊರಟಿದ್ದ ಟೆಂಪೋವೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ 13 ಮಂದಿ ದಾರುಣವಾಗಿ ಮೃತಪಟ್ಟ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ತೊರೆಶೆಟ್ಟಿಹಳ್ಳಿ ಗ್ರಾಮದಲ್ಲಿ ನಡೆದಿದೆ.

Advertisement

ಮೃತರನ್ನು ಮದ್ದೂರು ತಾಲೂಕಿನ ಅವಸರದಹಳ್ಳಿ ಬೀರಮ್ಮ ( 51) ಹಾಗೂ ಯಡನಹಳ್ಳಿಯ ಮಾದಮ್ಮ(63), ಪಾರ್ವತಮ್ಮ(48), ಜಯಮ್ಮ(46), ಸಣ್ಣಮ್ಮ (60),ರೇಣುಕಮ್ಮ(40),ಮೀನಾಕ್ಷಿ(37)  ಶಿವಣ್ಣ (45),ಸೋನು(5) ಮತ್ತು ವದುವಿನ ತಂಗಿ ಪೂಜಾ ಎಂದು ಗುರುತಿಸಲಾಗಿದೆ.

ಕುಣಿಗಲ್‌ ತಾಲೂಕಿನ ಶಿವನಹಳ್ಳಿ ವರ ಹಾಗೂ ಮದ್ದೂರು ತಾಲೂಕಿನ ಅವಸರದಹಳ್ಳಿ ರಾಜಪ್ಪ ಎನ್ನುವವರ ಮಗಳಿಗೆ ಮದುವೆ ನಿಶ್ಚಯವಾಗಿದ್ದು, ಭಾನುವಾರ ವಧುವಿನ ಕಡೆಯ 50ಕ್ಕೂ ಹೆಚ್ಚು ಮಂದಿ ಅವಸರದಹಳ್ಳಿಯಿಂದ ಟೆಂಪೋ ಮೂಲಕ ಮದ್ದೂರು ಪಟ್ಟಣದ ಕಲ್ಯಾಣ ಮಂಟಪಕ್ಕೆ ಹೊರಟಿದ್ದ ವೇಳೆ ಕೆಸ್ತೂರು ಠಾಣಾ ವ್ಯಾಪ್ತಿಯ ತೊರೆಶೆಟ್ಟಿಹಳ್ಳಿ ಗ್ರಾಮದ ಸಮೀಪ ಬೇರೆ ವಾಹನ ಹಿಂದಿಕ್ಕುವ ಭರದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.

ಅಪಘಾತದಲ್ಲಿ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಗಾಯಾಳುಗಳನ್ನು ಮಂಡ್ಯ ಮಿಮ್ಸ್‌ ಆಸ್ಪತ್ರೆ ಹಾಗೂ ಇತರ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ, ಘಟನಾ ಸ್ಥಳಕ್ಕೆ ಪೊಲೀಸ್‌ ಅಧಿಕಾರಿಗಳು ಭೇಟಿ ನೀಡಿದ್ದು ಪರಶೀಲನೆ ನಡೆಸಿದ್ದಾರೆ. ಮದ್ದೂರು ತಾಲೂಕಿನ ಕೆಸ್ತೂರು ಠಾ‌ಣೆಯಲ್ಲಿ ಅಈ ಕುರಿತು ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next