Advertisement

10-15 ಜನ ಕಾಂಗ್ರೆಸ್‌ ತೊರೆಯಲಿದ್ದಾರೆ: ಆರ್‌.ಅಶೋಕ್‌

10:20 PM Jan 28, 2022 | Team Udayavani |

ಬೆಂಗಳೂರು: ಕಾಂಗ್ರೆಸ್‌ನಲ್ಲಿ ಪಕ್ಷಾಂತರ ಪರ್ವ ಆರಂಭವಾಗಿದ್ದು, ಇನ್ನೂ 10-15 ಜನರು ಕಾಂಗ್ರೆಸ್‌ ತೊರೆಯಲಿದ್ದಾರೆ ಎಂದು ಕಂದಾಯ ಸಚಿವ ಆರ್‌.ಅಶೊಕ್‌ ಹೇಳಿದ್ದಾರೆ.

Advertisement

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ತಮ್ಮ ಸಂಪರ್ಕದಲ್ಲಿ 20 ಜನ ಇದ್ದಾರೆ ಎಂದು ಹೇಳಿದ್ದರು. ಡಿಕೆ ಶಿವಕುಮಾರ್‌ ಒಂದು ಹೆಜ್ಜೆ ಮುಂದೆ ಹೋಗಿ ನನ್ನ ಸಂಪರ್ಕದಲ್ಲಿ ಮಂತ್ರಿಗಳಿದ್ದಾರೆ ಎಂದು ಹೇಳಿದ್ದರು. ಆದರೆ, ಅವರ ಮನೆ ದಿಡ್ಡಿ ಬಾಗಿಲೆ ಕಿತ್ತುಕೊಂಡು ಹೋಗಿದೆ. ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್‌ಗೆ ತರುವ ಕೆಲಸ, ಮುಖ್ಯಮಂತ್ರಿಯನ್ನಾಗಿ ಕೆಲಸ ಮಾಡಿದ್ದು ಸಿ ಎಂ ಇಬ್ರಾಹಿಂ, ಆದರೆ, ಅವರೇ ಪಾರ್ಟಿ ಬಿಟ್ಟಿದ್ದಾರೆ ಎಂದರು.

ಕಾಂಗ್ರೆಸ್‌ ಪಕ್ಷವೇ ಮನೆಯೊಂದು ಮೂರು ಬಾಗಿಲಾಗಿದೆ. ನನಗೆ ಶಿವಕುಮಾರ್‌ ಲೀಡರ್‌ ಅಲ್ಲ, ಸಿದ್ದರಾಮಯ್ಯ ಲೀಡರ್‌ ಎಂದು ಇಬ್ರಾಹಿಂ ಹೇಳಿದ್ದರು. ಆದರೆ ಅವರೇ ನನಗೆ ದ್ರೋಹ ಬರೆದರು ಎಂದಿದ್ದಾರೆ. ನಾವು ಹೇಳಿದ್ದು ಸತ್ಯವಾಗಿದೆ, ಅವರು ಹೇಳಿದ್ದು ಸುಳ್ಳಾಗಿದೆ. ಅವರ ಪಾರ್ಟಿಯಿಂದ ಮೊದಲ ವಿಕೆಟ್‌ ಪತನವಾಗಿದೆ. ಇನ್ನೂ 10 ರಿಂದ 15 ಜನ ಕಾಂಗ್ರೆಸ್‌ ತೊರೆಯಲಿದ್ದಾರೆ.

ಇದನ್ನೂ ಓದಿ:“ರಾಷ್ಟ್ರವೇ ಮೊದಲು’ ಎಂಬ ಯುವಕರಿಂದಲೇ ದೇಶದ ಅಭಿವೃದ್ಧಿ

ಕರ್ನಾಟಕ ದಲ್ಲಿ ಕಾಂಗ್ರೆಸ್‌ ಖಾಲಿಯಾಗುವ ಪರಿಸ್ಥಿತಿ ಕಾಣಿಸುತ್ತಿದೆ. ಅವರನ್ನ ಉಳಿಸಿಕೊಳ್ಳುವ ವಿಶ್ವಾಸ ಇಟ್ಟುಕೊಂಡುದ್ದಾರೆ, ಆದರೆ, ಅವರು ಬೇರೆ ಕಡೆ ಕಾಲು ಇಟ್ಟಿದ್ದಾರೆ. ಕಾಂಗ್ರೆಸ್‌ ಮನೆ ಖಾಲಿಯಾಗುತ್ತಿದೆ. ಇದು ಪ್ರಾರಂಭ ಎಂದು ಅಶೋಕ್‌ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next