Advertisement

ತಮಿಳು ನಾಡಿನಲ್ಲಿ 2 ರೈಲು ಹಳಿ ತಪ್ಪಿದ ದುರಂತ; ಒಂದು ಸಾವು

05:57 PM Oct 02, 2018 | udayavani editorial |

ಚೆನ್ನೈ : ತಮಿಳು ನಾಡಿನಲ್ಲಿ ಇಂದು ಮಂಗಳವಾರ ರೈಲು ಹಳಿ ತಪ್ಪಿದ ಎರಡು ಪ್ರತ್ಯೇಕ ದುರ್ಘ‌ಟನೆಗಳು ನಡೆದಿವೆ.  ಅಂಬಟ್ಟೂರಿನಲ್ಲಿ ವೇ ಬ್ರಿಜ್‌ ಕಂಟೇನರ್‌ ಕುಸಿದು ಬಿದ್ದ ಅವಘಡದಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ. 

Advertisement

ದಕ್ಷಿಣ ರೈಲ್ವೇ ಈ ಘಟನೆಯ ಬಗ್ಗೆ ಬಹುಸ್ತರದ ಶಿಸ್ತು ತನಿಖೆಯನ್ನು ಆದೇಶಿಸಿದೆ. 

ದಕ್ಷಿಣ ರೈಲ್ವೇ ಅಧಿಕಾರಿ ತಿಳಿಸಿರುವ ಪ್ರಕಾರ ಅಂಬಟ್ಟೂರಿನಲ್ಲಿ ಗೂಡ್ಸ್‌ ರೈಲೊಂದು ಹಿಂದೆ ಸರಿದ ಬಂದ ಕಾರಣ ಬ್ರೇಕ್‌ ವ್ಯಾನ್‌ ಮತ್ತು ಒಂದು ವ್ಯಾಗನ್‌ ಹಳಿ ತಪ್ಪಿತು. ಪರಿಣಾಮವಾಗಿ ಕೊನೇ ತುದಿಯಲ್ಲಿದ್ದ ವೇ ಬ್ರಿಜ್‌ ಕಂಟೇನರ್‌ ಉರುಳಿ ಬಿತ್ತು. ವೇ ಬ್ರಿಜ್‌ ಅಡಿ ಕುಳಿತಿದ್ದ ವ್ಯಕ್ತಿಯ ಮೇಲೆ ಅದು ಕುಸಿದು ಬಿದ್ದು ಆತ ಅಸು ನೀಗಿದ. 

ಎಗ್‌ಮೋರ್‌ನಲ್ಲಿ ಯಾರ್ಡ್‌ ಕಡೆಗೆ ಸಾಗುತ್ತಿದ್ದ ಎಕ್ಸ್‌ಪ್ರೆಸ್‌ ರೈಲೊಂದರ ಖಾಲಿ ಕೋಚ್‌ ಹಳಿ ತಪ್ಪಿತೆಂದು ಮೂಲಗಳು ತಿಳಿಸಿವೆ. 

Advertisement

Udayavani is now on Telegram. Click here to join our channel and stay updated with the latest news.

Next