Advertisement

ಈಶಾನ್ಯ ದಿಲ್ಲಿಯಲ್ಲಿ ಇರಿತಕ್ಕೆ ಓರ್ವ ಬಲಿ, ಇನ್ನೊಬ್ಬನ ಸ್ಥಿತಿ ಗಂಭೀರ

03:49 PM Dec 27, 2018 | udayavani editorial |

ಹೊಸದಿಲ್ಲಿ : ಈಶಾನ್ಯ ದಿಲ್ಲಿಯ ಭಜನ್‌ಪುರ ಪ್ರದೇಶದಲ್ಲಿ ಅಪರಿಚಿತ ದುಷ್ಕರ್ಮಿಗಳು ನಡೆಸಿದ ಇರಿತಕ್ಕೆ ಓರ್ವ ವ್ಯಕ್ತಿ ಮಡಿದು  ಇನ್ನೋರ್ವ ಗಂಭೀರವಾಗಿ ಗಾಯಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

ಈಶಾನ್ಯ ದಿಲ್ಲಿಯ ಭಜನ್‌ಪುರ ಪ್ರದೇಶದ ಖಜೂರಿ ಚೌಕ್‌ ಸಮೀಪ ನಡೆದಿರುವ ಈ ಘಟನೆಯಲ್ಲಿ ಮೃತ ಪಟ್ಟಿರುವ ವ್ಯಕ್ತಿಯನ್ನು  ಪ್ರೇಮ್‌ ಸಾನು ಗೌರ್‌ (22) (ಕಾದೀಪುರ, ಕಾದಿ ವಿಹಾರ್‌ ನಿವಾಸಿ) ಮತ್ತು ಗಾಯಾಳುವನ್ನು  ದೇವ್‌ ಶರ್ಮಾ (30)  ಎಂದು ಗುರುತಿಸಲಾಗಿದೆ.

ಈ ಇರಿತದ ಘಟನೆಗೆ ಕಾರಣವೇನೆಂಬುದು ಗೊತ್ತಾಗಿಲ್ಲ; ಸಂತ್ರಸ್ತರ ಮೊಬೈಲ್‌, ಹಣದ ಪರ್ಸ್‌ ಎಲ್ಲವೂ ಅವರ ಬಳಿಯೇ ಇರುವುದರಿಂದ ದರೋಡೆ ಉದ್ದೇಶ ಇದ್ದಂತೆ ಕಾಣುವುದಿಲ್ಲ ಎಂದು ಪೊಲೀಸರು ತಿಳಿಸಿದ್ದು ಕೊಲೆ ಕೇಸನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next