Advertisement

ಯುವಕನ ಕೊಲೆ ಆರೋಪಿಗಳ ಬಂಧನ

04:05 PM Feb 25, 2021 | Team Udayavani |

ಬೆಳಗಾವಿ: ತಾಲೂಕಿನ ಸೋಮನಟ್ಟಿ ಗ್ರಾಮದ ಸಾಗರ ಗಂಗಪ್ಪ ಪೂಜೇರಿ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬುಧವಾರ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಮಾರ್ಕೆಟ್‌ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

Advertisement

ಕೋಳಾನಟ್ಟಿ ಗ್ರಾಮದ ಬಾಳಪ್ಪ ಬಿ ದಿನ್ನಿ, ಬಸವರಾಜ ಯಲ್ಲಪ್ಪ ಉಪ್ಪಾರ ಹಾಗೂ ಸಂಪಗಾವಿ ಗ್ರಾಮದ ಮಂಜುನಾಥ ಪೀರಪ್ಪ ಬೀಡಿ ಬಂಧಿತ ಆರೋಪಿಗಳು. ತನ್ನ ಮಗ ಕಾಣೆಯಾಗಿದ್ದಾನೆ ಎಂದು ತಂದೆ ಗಂಗಪ್ಪ ಪೂಜೇರಿ ಫೆ. 11 ರಂದು ಮಾರ್ಕೆಟ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದರು.

ಸಾಗರ ಪೂಜೇರಿ ಕಾಣೆಯಾದ ಕೆಲ ದಿನಗಳ ನಂತರ ಉತ್ತರಕನ್ನಡ ಜಿಲ್ಲೆಯ ಉಳವಿ ಬಳಿ ಆತನ ಶವ ಪತ್ತೆಯಾಗಿತ್ತು. ಈ ಪ್ರಕರಣದ ಬೆನ್ನಟ್ಟಿದ ಪೊಲೀಸರು ಮೂವರು ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಡಿಸಿಪಿ ವಿಕ್ರಮ ಆಮಟೆ ಮಾರ್ಗದರ್ಶನದಲ್ಲಿ ಎ ಸಿ ಪಿ ಎಸ್‌ ಆರ್‌ ಕಟ್ಟಿಮನಿ ಪೊಲೀಸ್‌ ಇನಸ್ಪೆಕ್ಟರ್‌ ಸಂಗಮೇಶ ಶಿವಯೋಗಿ, ಪಿ ಎಸ್‌ ಐ ವಿಠ್ಠಲ ಹಾವನ್ನವರ ಹಾಗೂ ಸಿಬ್ಬಂದಿಗಳು ಈ  ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next