Advertisement

ತ್ಯಾಜ್ಯ ತಿಂದು 5 ಜಾನುವಾರು ಸಾವು

02:57 PM Nov 07, 2021 | Adarsha |

ಶಿವಮೊಗ್ಗ: ಘನ ತ್ಯಾಜ್ಯ ವಿಲೇವಾರಿಯಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆನಿರ್ಲಕ್ಷಕ್ಕೆ ಐದು ಜಾನುವಾರುಗಳು ಬಲಿಯಾಗಿವೆ. ತ್ಯಾಜ್ಯ ಸಂಗ್ರಹವಾಹನಗಳ ಚಾಲಕರು ತ್ಯಾಜ್ಯವನ್ನುಡಂಪಿಂಗ್‌ ಯಾರ್ಡ್‌ ಬದಲುನಗರ ಸಮೀಪದ ಅನುಪಿನಕಟ್ಟೆ ಬಳಿಇರುವ ತುಂಗಾ ಎಡದಂಡೆ ಕಾಲುವೆಯಅಕ್ಕಪಕ್ಕದ ಖಾಲಿ ಜಾಗದಲ್ಲಿ ಸುರಿದಿದ್ದಾರೆ.

Advertisement

ರಸ್ತೆ ಬದಿ ಹಾಕಿದ್ದ ಘನತ್ಯಾಜ್ಯ, ಕಟ್ಟಡ ನಿರ್ಮಾಣದ ವೇಸ್ಟ್‌ ಹಾಗೂ ಕಲ್ಯಾಣ ಮಂಟಪದ ಘನತ್ಯಾಜ್ಯ ತಿಂದುಅನುಪಿನಕಟ್ಟೆ ಗ್ರಾಮದ ಜಾನುವಾರುಗಳು ಮೃತಪಟ್ಟಿವೆ.ಕಳೆದ ಎರಡು ದಿನದಲ್ಲಿ ಐದಕ್ಕೂ ಹೆಚ್ಚು ಜಾನುವಾರುಗಳು ಮೃತಪಟ್ಟಿವೆ.

ಅನುಪಿನ ಕಟ್ಟೆ ಗ್ರಾಮದ ಚಿತ್ರಾ ಪ್ರಕಾಶ್‌, ರತ್ನಮ್ಮ ಬೋರೇಗೌಡ ಸೇರಿದಂತೆ ಹಲವರ ಮನೆಯ ಜಾನುವಾರುಗಳು ಮೃತಪಟ್ಟಿದ್ದು, ಪಾಲಿಕೆ ನಿರ್ಲಕ್ಷಕ್ಕೆಅನುಪಿನಕಟ್ಟೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘನತ್ಯಾಜ್ಯವನ್ನು ಸಮಪರ್ಕವಾಗಿ ವಿಲೇವಾರಿಮಾಡುವಂತೆ ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next