Advertisement

ಭ್ರಷ್ಟಾಚಾರ ಸಹಿಸಲ್ಲ: ಸಿಬಿಐನಿಂದ ಬಂಧಿಸಲ್ಪಟ್ಟ ಬಿಜೆಪಿ ಕೌನ್ಸಿಲರ್ ಪಕ್ಷದಿಂದ ಅಮಾನತು

01:37 PM Dec 05, 2020 | Nagendra Trasi |

ನವದೆಹಲಿ: ಸಿಬಿಐನಿಂದ ಬಂಧನಕ್ಕೊಳಗಾಗಿರುವ ನಗರಪಾಲಿಕೆ ಕೌನ್ಸಿಲರ್ ನನ್ನು ದೆಹಲಿ ಬಿಜೆಪಿ ಅಧ್ಯಕ್ಷ ಆದೇಶ್ ಗುಪ್ತಾ ಅವರು ಶನಿವಾರ(ಡಿಸೆಂಬರ್ 05, 2020) ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಿರುವುದಾಗಿ ವರದಿ ತಿಳಿಸಿದೆ.

Advertisement

ದೆಹಲಿ ಬಿಜೆಪಿ ವಕ್ತಾರ ಪ್ರವೀಣ್ ಶಂಕರ್ ಕಪೂರ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ತನಿಖಾ ವರದಿ ಬಂದ ಕೂಡಲೇ ಗುಪ್ತಾ ಅವರು ಪಾಲಿಕೆ ಕೌನ್ಸಿಲರ್ ಮನೋಜ್ ಮಹಲಾವಾತ್ ನನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ವಜಾಗೊಳಿಸಿರುವುದಾಗಿ ತಿಳಿಸಿದ್ದಾರೆ.

ಭ್ರಷ್ಟಾಚಾರದ ವಿಚಾರದಲ್ಲಿ ಪಕ್ಷ ಯಾವುದೇ ರಾಜೀ ಸೂತ್ರ ಅನುಸರಿಸುವುದಿಲ್ಲ. ಭ್ರಷ್ಟಾಚಾರವನ್ನು ಸಹಿಸಿಕೊಳ್ಳುವ ಪ್ರಶ್ನೆಯೂ ಇಲ್ಲ ಎಂದು ಮನೋಜ್ ಹೇಳಿದರು.

ಇದನ್ನೂ ಓದಿ:ಕೋವ್ಯಾಕ್ಸಿನ್ ಲಸಿಕೆ ಪ್ರಯೋಗಕ್ಕೆ ಒಳಗಾದ ಹರ್ಯಾಣ ಸಚಿವ ವಿಜ್ ಗೆ ಕೋವಿಡ್ ಸೋಂಕು

ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೋರೇಶನ್ ನ ವಸಂತ್ ಕುಂಜ್ ವಾರ್ಡ್ ನ ಕೌನ್ಸಿಲರ್ ಆಗಿದ್ದ ಮನೋಜ್ ಮೆಹಲಾವತ್ ನನ್ನು ಹತ್ತು ಲಕ್ಷ ರೂಪಾಯಿ ಲಂಚದ ಬೇಡಿಕೆ ಆರೋಪದಲ್ಲಿ ಬಂಧಿಸಿದ್ದರು.

Advertisement

“ಯಾವುದೇ ಅಡೆತಡೆಯಿಲ್ಲದೆ ಮನೆ ಕಟ್ಟಲು ಅವಕಾಶ ನೀಡಲು ಲಂಚ ನೀಡುವಂತೆ ಕೌನ್ಸಿಲರ್ ಬೇಡಿಕೆ ಇಟ್ಟಿರುವುದಾಗಿ ವರದಿ ತಿಳಿಸಿದೆ. ಬಂಧಿತ ಕೌನ್ಸಿಲರ್ ನನ್ನು ವಿಶೇಷ ಕೋರ್ಟ್ ಗೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಿರುವುದಾಗಿ” ವರದಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next