Advertisement

ಜಮೀರ್‌ ಬಂಧನ ಯಾಕಿಲ್ಲ?: ಈಶ್ವರಪ್ಪ

10:26 PM Jul 16, 2019 | Lakshmi GovindaRaj |

ಯಲಹಂಕ: “ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ನೋಟಿಸ್‌ ನೀಡಿರುವ ಎಸ್‌ಐಟಿ, ಶಾಸಕ ಆರ್‌. ರೋಷನ್‌ ಬೇಗ್‌ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದೆ. ಆದರೆ ಸಚಿವ ಜಮೀರ್‌ ಅಹಮ್ಮದ್‌ ಖಾನ್‌ ಅವರನ್ನು ಯಾಕೆ ಬಂಧಿಸಿಲ್ಲ’ ಎಂದು ಶಾಸಕ ಕೆ.ಎಸ್‌. ಈಶ್ವರಪ್ಪ ಪ್ರಶ್ನಿಸಿದರು.

Advertisement

ಇಲ್ಲಿನ ರಮಡಾ ರೆಸಾರ್ಟ್‌ ಬಳಿ ಸುದ್ದಿಗಾರರೊಂದಿಗೆ ಮಾತನಾಡಿ, “ಸರ್ಕಾರದ ಕೈಗೊಂಬೆಯಾಗಿರುವ ಎಸ್‌ಐಟಿ ಸಮ್ಮಿಶ್ರ ಸರ್ಕಾರದ ವಿರುದ್ದ ಧ್ವನಿ ಎತ್ತಿದ ರೋಷನ್‌ ಬೇಗ್‌ ಅವರನ್ನು ಮಾತ್ರ ಬಂಧಿಸಿದೆ. ಮೈತ್ರಿ ಸರ್ಕಾರಕ್ಕೆ ಪ್ರಾಮಾಣಿಕತೆ, ನೈತಿಕತೆ ಇದ್ದರೆ ಸಚಿವ ಜಮೀರ್‌ ಅಹಮದ್‌ ಅವರನ್ನೂ ಬಂಧಿಸಬೇಕಿತ್ತು’ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next