Advertisement

ನನ್ನನ್ನು ರಾಜಕೀಯವಾಗಿ ಮುಗಿಸಲು ಯಾರಿಗೂ ಸಾಧ್ಯವಿಲ್ಲ: ಜಮೀರ್ ಅಹಮದ್ ಖಾನ್

02:10 PM Sep 14, 2020 | keerthan |

ಬೆಂಗಳೂರು: ಡ್ರಗ್ ವಿಚಾರದಲ್ಲಿ ನನ್ನ ಹೆಸರು ತಳುಕು ಹಾಕಿ ನನ್ನನ್ನು ರಾಜಕೀಯವಾಗಿ ಮುಗಿಸಲು ಹೊರಟಿದ್ದಾರೆ. ಆದರೆ ನನ್ನನ್ನು ಮುಗಿಸಲು ‌ಯಾರಿಗೂ‌ ಆಗಲ್ಲ. ನಾನು ಯಾವುದೇ ತಪ್ಪನ್ನೂ ‌ಮಾಡಿಲ್ಲ ಎಂದು ಶಾಸಕ ಜಮೀರ್ ಅಹಮದ್ ಖಾನ್ ಹೇಳಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಜನಾ ನನ್ನ ಜೊತೆ ಕೊಲಂಬೋಗೆ ಹೋಗಿದ್ದಾರೆ ಎಂದು ಮಾಧ್ಯಮಗಳಲ್ಲಿ ಆರೋಪ ಮಾಡಿದ್ದಾರೆ. ಸಂಜನಾ ಏನಾದ್ರೂ ದಾಖಲೆ ಕೊಟ್ಟಿದ್ದಾರಾ? ಈಗ ಸಂಜನಾ ಬಿಟ್ಟು ಫಾಸಿಲ್ ಬಗ್ಗೆ ಮಾತನಾಡುತ್ತಿದ್ದಾರೆ. ನಾನು ಎಲ್ಲೂ ತಪ್ಪು ಮಾಡಿಲ್ಲ.ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಮಾಡಲಿ ಎಂದರು.

ಸಂಜನಾ ಜೊತೆ ಜಮೀರ್ ಹೋಗಿದ್ದರು ಎಂದು ಯಾರು ಹೇಳಿದ್ದು. ಸಂಬರಗಿ ತಾನೇ, ಅವರನ್ನೇ ಕೇಳಿ. ಸಂಜನಾ ಜೊತೆ ನಾನು‌ ಹೋಗಿರುವ ‌ಒಂದು ಫೋಟೋ ತೋರಿಸಿ.  ಸುಮ್ಮನೆ ಸಂಜನಾ ಬಗ್ಗೆ ಯಾಕೆ ಎಳೆದು ತರ್ತೀರಾ? ರಾಹುಲ್ ಜೊತೆ ಸಂಬರಗಿ ಫೋಟೋ ಇದೆ.  ನೀವು ಮಾಧ್ಯಮಗಳು ಯಾಕೆ ಸಂಬರಗಿ ಬೆನ್ನು ಬಿದ್ದಿಲ್ಲ. ಡ್ರಗ್ ಪೆಡ್ಲರ್ ಅಂತ ರಾಹುಲ್ ಗೆ ಹೇಳುತ್ತೀರಾ ಆದರೆ ಯಾಕೆ ಸಂಬರಗಿ ಅವರ ಜೊತೆ ಇದ್ದರೂ ಕೇಳುತ್ತಿಲ್ಲ ಎಂದರು.

ಇದನ್ನೂ ಓದಿ: ಮಾದಕ ಲೋಕಕ್ಕೆ ಲಂಕೆಯ ಲಿಂಕ್! ದಕ್ಷಿಣ ಭಾರತದ ರಾಜ್ಯಗಳಿಂದಲೇ ವಿದೇಶಗಳಿಗೆ ಗಾಂಜಾ?

ಪೊಲೀಸ್ ಠಾಣೆಯಲ್ಲೂ ಸಂಬರಗಿ ವಿರುದ್ಧ ದೂರು ಕೊಟ್ಟಿದ್ದೇನೆ. ನಮ್ಮ‌ ರಾಜ್ಯದ ಪೊಲೀಸರು ನಂಬರ್ ವನ್ ಇದ್ದಾರೆ. ಸಂಬರಗಿ ಒಳ್ಳೆ ಕೆಲಸ ಮಾಡುತ್ತಿದ್ದಾರೆ, ಮಾಡ್ಲಿ. ಅವರು ನನ್ನ ಮೇಲೆ ಎಲ್ಲೂ ಡ್ರಗ್ಸ್ ಆರೋಪ ಮಾಡಿಲ್ಲ ಎಂದರು.

Advertisement

ಫಾಸಿಲ್ ತಪ್ಪು ಮಾಡಿದ್ದರೆ ಶಿಕ್ಷೆ ಕೊಡಲಿ. ಫಾಸಿಲ್ ಗೂ ನನಗೂ ಯಾವುದೇ ಸಂಬಧವಿಲ್ಲ. ಮೂರು ವರ್ಷಗಳಿಂದ ಅವನು ನನಗೆ ಕಂಡೇ ಇಲ್ಲ. ಉಮ್ರಾಗೆ ನಾನು ಹೋಗಿದ್ದೇನೆ. ಅಲ್ಲಿಗೆ ಎಲ್ಲರೂ ಬರ್ತಾರೆ. ಅವನೂ‌ ಬಂದಿರಬಹುದು. ರಾಜ್ಯದಿಂದ ಸಾವಿರಾರು ಜನ ಬರ್ತಾರೆ. ತಪ್ಪು ಮಾಡಿದ್ದರೆ ಯಾರೇ ಆಗಲಿ ಶಿಕ್ಷೆ ಕೊಡಲಿ ಎಂದರು.

ಕುಮಾರಸ್ವಾಮಿ ಆರೋಪ ವಿಚಾರಕ್ಕೆ ಉತ್ತರಿಸಿದ ಜಮೀರ್,  ಕೊಲಂಬೋಗೆ ಹೋಗುವುದು ತಪ್ಪಾ? ನಾನು ನನ್ನ ಫ್ಯಾಮಿಲಿ ಜೊತೆ ಎರಡು ಬಾರಿ ‌ಹೋಗಿದ್ದೇನೆ. ಕುಮಾರಸ್ವಾಮಿಯವರ ಜೊತೆಗೂ‌ ಹೋಗಿದ್ದೇನೆ. ಜೆಡಿಎಸ್ ಶಾಸಕರ ಜೊತೆ ಕೊಲಂಬೋಗೆ ಹೋಗಿದ್ದೇವೆ. ಕೊಲಂಬೋಗೆ ಪ್ರವಾಸಕ್ಕೆ‌ ಹೋಗಿದ್ದೆವು. ಕೊಲಂಬೋಗೆ ಹೋದರೆ ಕ್ಯಾಸಿನೋಗೆ ಹೋದ ಹಾಗೆ ಅಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next