Advertisement

Zakir Naik ವಿವಾದ; ಎಲ್ಲರೂ ಅಲ್ಲಾಹನನ್ನಷ್ಟೇ ಪ್ರಾರ್ಥಿಸಿದರೆ ಶಾಂತಿ…

01:22 AM Oct 06, 2024 | Team Udayavani |

ಹೊಸದಿಲ್ಲಿ: ಭಾರತದಿಂದ ಪರಾರಿಯಾಗಿರುವ ಇಸ್ಲಾಂ ಪ್ರವಚನಕಾರ ಜಾಕೀರ್‌ ನಾಯ್ಕ ಪಾಕಿಸ್ಥಾನದಲ್ಲಿ ಇನ್ನೊಂದು ವಿವಾದವೆಬ್ಬಿಸಿದ್ದಾರೆ. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾಗ ಅವರಿಗೆ ಅಲ್ಲಿನ ಹಿಂದೂ ವಿದ್ವಾಂಸ ಪ್ರೊ|ಮನೋಜ್‌ ಚೌಹಾಣ್‌, ಜಗತ್ತಿನಲ್ಲಿ ಧರ್ಮದ ಹೆಸರಿ ನಲ್ಲಿ ಹಲವು ಕೊಲೆಗಳು ನಡೆಯುತ್ತಿವೆ. ಇದನ್ನು ತಪ್ಪಿಸಿ ಶಾಂತಿ ನೆಲೆಸಲು ಏನು ಮಾಡಬೇಕೆಂದು ಕೇಳಿದರು. ಅದಕ್ಕೆ ಉತ್ತರಿಸಿದ ಜಾಕೀರ್‌ ನಾಯ್ಕ, ಇದಕ್ಕೆ ಕುರಾನ್‌ನಲ್ಲೇ ಉತ್ತರವಿದೆ. ಜಗತ್ತಿನಲ್ಲಿರುವ ಎಲ್ಲರೂ ಒಬ್ಬ ಅಲ್ಲಾನನ್ನು ಮಾತ್ರ ಪ್ರಾರ್ಥಿಸಿದರೆ ಸಾಕು, ಇದರಿಂದ ಶಾಂತಿ ಸ್ಥಾಪನೆಯಾಗುತ್ತೆ ಎಂದರು. ಇದು ಸಾಮಾಜಿಕ ತಾಣಗಳಲ್ಲಿ ವಿವಾದಕ್ಕೆ ಕಾರಣವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next