Advertisement

ಕ್ಷಮಾಪಣೆ ಕೋರಿದ ಝಾಕಿರ್‌ ನಾಯ್ಕ

01:25 AM Aug 21, 2019 | Team Udayavani |

ಕೌಲಾಲಂಪುರ: ವಿವಾದಿತ ಧರ್ಮ ಪ್ರಚಾರಕ ಝಾಕಿರ್‌ ನಾಯ್ಕ ತಮ್ಮ ಧರ್ಮ ಪ್ರಚೋದಕ ಹೇಳಿಕೆಗಾಗಿ ಮಲೇಷ್ಯಾ ಜನರಲ್ಲಿ ಕ್ಷಮೆ ಕೋರಿದ್ದಾರೆ. ಇತ್ತೀಚೆಗೆ ಹಿಂದೂ ವಿರೋಧಿ ಹೇಳಿಕೆ ನೀಡಿದ್ದ ಝಾಕಿರ್‌ರನ್ನು ಮಲೇಷ್ಯಾ ಪೊಲೀಸರು 10 ತಾಸುಗಳವರೆಗೆ ವಿಚಾರಣೆ ನಡೆಸಿದ್ದರು. ಅಷ್ಟೇ ಅಲ್ಲ, ಮಂಗಳವಾರದಿಂದ ಝಾಕಿರ್‌ ನಾಯ್ಕ ಯಾವುದೇ ಸಾರ್ವಜನಿಕ ಭಾಷಣ ಸೇರಿದಂತೆ ಸಾರ್ವಜನಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತಿಲ್ಲ ಎಂದು ಸೂಚಿಸಿದ್ದಾರೆ.

Advertisement

ಆಗಸ್ಟ್‌ 8 ರಂದು ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ್ದ ಝಾಕಿರ್‌ ನಾಯ್ಕ, ಹಿಂದೂಗಳು ಹಾಗೂ ಚೀನೀಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದರು. ಇದು ತೀವ್ರ ವಿವಾದಕ್ಕೀಡಾಗುತ್ತಿದ್ದಂತೆ ಮಲೇಷ್ಯಾದ ಹಲವು ಸಚಿವರು ಆಕ್ಷೇಪ ವ್ಯಕ್ತಪಡಿಸಿದ್ದರು. ಕಳೆದ ಶುಕ್ರವಾರ ಮೊದಲ ಸುತ್ತಿನ ವಿಚಾರಣೆ ನಡೆಸಿದ ಪೊಲೀಸರು ಸೋಮವಾರವೂ 10 ತಾಸುಗಳವರೆಗೆ ವಿಚಾರಣೆ ನಡೆಸಿದ್ದರು. ನಂತರ ನಾಯ್ಕ ತಮ್ಮ ಹೇಳಿಕೆಗೆ ಮಲೇಷ್ಯಾದ ನಾಗರಿಕರಿಗೆ ನೋವಾಗಿದ್ದಲ್ಲಿ ಕ್ಷಮೆ ಕೋರುತ್ತೇನೆ ಎಂಬ ಸಂದೇಶವನ್ನು ರವಾನಿಸಿದ್ದಾರೆ ಎಂದು ಮಲೇಷ್ಯಾ ಮಾಧ್ಯಮಗಳು ವರದಿ ಮಾಡಿವೆ.

Advertisement

Udayavani is now on Telegram. Click here to join our channel and stay updated with the latest news.

Next