Advertisement

ಆಸಿಸ್‌ ಏಕದಿನ ಸರಣಿಗೆ ತಂಡ ಪ್ರಕಟ: ಯುವಿಗೆ ಮತ್ತೆ ನಿರಾಸೆ 

02:30 PM Sep 10, 2017 | |

ನವದೆಹಲಿ: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಮೊದಲ ಮೂರು ಏಕದಿನ ಪಂದ್ಯಗಳಿಗೆ ರಾಷ್ಟ್ರೀಯ ಆಯ್ಕೆ ಸಮಿತಿ ಭಾರತೀಯ ತಂಡವನ್ನು ಭಾನುವಾರ ಪ್ರಕಟ ಮಾಡಿದ್ದು ಯುವರಾಜ್‌ ಸಿಂಗ್‌ಗೆ ಮತ್ತೆ ನಿರಾಸೆಯಾಗಿದೆ.

Advertisement

ತಂಡಕ್ಕೆ ವೇಗಿಗಳಾದ ಮಹಮದ್‌ ಶಮಿ ಮತ್ತು ಉಮೇಶ್‌ ಯಾದವ್‌ ಅವರ ಪುನರಾಗಮನವಾಗಿದ್ದು, ಪ್ರಮುಖ ಸ್ಪಿನ್ನರ್‌ಗಳಾದ ಆರ್‌.ಅಶ್ವಿ‌ನ್‌ ಮತ್ತು ರವೀಂದ್ರ ಜಡೇಜಾ ಅವರಿಗೆ ವಿಶ್ರಾಂತಿ ನೀಡಲಾಗಿದೆ.

ಶ್ರೀಲಂಕಾ ವಿರುದ್ಧದ ಸರಣಿಗೆ ಕಡೆಗಣಿಸಲ್‌ಪಟ್ಟಿದ್ದ ಯುವರಾಜ್‌ ಸಿಂಗ್‌ಗೆ ಈ ಬಾರಿ ಅವಕಾಶ ಸಿಗಬಹುದು ಎಂದು ನಿರೀಕ್ಷಿಸಲಾಗಿತ್ತು. ಯುವರಾಜ್‌ ಅವರನ್ನು ಕಡೆಗಣಿಸಿಲ್ಲ, ಅವರಿಗೆ ವಿಶ್ರಾಂತಿ ನೀಡಲಾಗಿದೆ ಎಂದು ಆಯ್ಕೆ ಸಮಿತಿಯ ಮುಖ್ಯಸ್ಥ ಎಂ.ಎಸ್‌.ಕೆ ಪ್ರಸಾದ್‌ ತಿಳಿಸಿದ್ದಾರೆ. 

ಸದ್ಯ ಅಶ್ವಿ‌ನ್‌ ನಾಲ್ಕು ಪಂದ್ಯಗಳ ಒಪ್ಪಂದದಂತೆ ಇಂಗ್ಲಿಷ್‌ ಕೌಂಟಿ ವೂರ್ಸೆಸ್ಟರ್‌ಶೈರ್‌ ಪರ ಆಡುತ್ತಿದ್ದು ಎರಡು ಪಂದ್ಯಗಳು ಮುಗಿದಿವೆ. ಇನ್ನೆರಡು ಪಂದ್ಯ ಬಾಕಿ ಉಳಿದಿವೆ. 

ಶ್ರೀಲಂಕಾ ಸರಣಿಗೆ ಆಯ್ಕೆ ಯಾಗಿದ್ದ ಶಾರ್ದೂಲ್‌ ಠಾಕೂರ್‌ ಅವರನ್ನು ತಂಡದಿಂದ ಕೈಬಿಡಲಾಗಿದೆ. 

Advertisement

5 ಪಂದ್ಯಗಳ ಏಕದಿನಗಳ ಸರಣಿ ಸೆಪ್ಟೆಂಬರ್‌ 17 ರಂದು ಚೆನ್ನೈನಲ್ಲಿ ಆರಂಭವಾಗಲಿದೆ. 

ತಂಡ ಇಂತಿದೆ

ವಿರಾಟ್‌ ಕೊಹ್ಲಿ(ನಾಯಕ), ರೋಹಿತ್‌ ಶರ್ಮಾ, ಶಿಖರ್‌ ಧವನ್‌, ರಾಹುಲ್‌, ಮನೀಷ್‌ ಪಾಂಡೆ, ಕೆದಾರ್‌ ಜಾಧವ್‌, ಅಜಿಂಕ್ಯ ರೆಹಾನೆ, ಎಂ.ಎಸ್‌.ಧೋನಿ, ಹಾರ್ದಿಕ್‌ ಪಾಂಡ್ಯಾ, ಅಕ್ಷರ್‌ ಪಟೇಲ್‌, ಕುಲದೀಪ್‌ ಯಾದವ್‌,ಯಜುವೇಂದ್ರ ಚಾಹಲ್‌, ಜಸ್‌ಪ್ರೀತ್‌ ಬುಮ್ರಾ , ಭುವನೇಶ್ವರ್‌ ಕುಮಾರ್‌, ಉಮೇಶ್‌ ಯಾದವ್‌, ಮಹಮದ್‌ ಶಮಿ. 

Advertisement

Udayavani is now on Telegram. Click here to join our channel and stay updated with the latest news.

Next