Advertisement

ಯುಗಪುರುಷ ಹೀರೋ ಅರ್ಜುನ್‌ ದೇವ್‌ರನ್ನು ಬೆನ್ನಟ್ಟಿ ದುಷ್ಕರ್ಮಿಗಳ ದಾಳಿ

12:16 PM May 30, 2017 | Team Udayavani |

ರಾಮನಗರ : ಇಲ್ಲಿನ ಬೆಂಗಳೂರು -ಮೈಸೂರು ಹೆದ್ದಾರಿಯಲ್ಲಿರುವ ಎಸ್‌ಬಿಎಂ ಕಚೇರಿಯೆದುರು ನವ ನಟ ಅರ್ಜುನ್‌ ದೇವ್‌ ಅವರ ಕಾರನ್ನು  ದುಷ್ಕರ್ಮಿಗಳು ರಾಡ್‌ಗಳಿಂದ ಹೊಡೆದು ಜಖಂಗೊಳಿಸಿದ ಘಟನೆ ಮಂಗಳವಾರ ಬೆಳಗ್ಗೆ ಸಂಭವಿಸಿದೆ. 

Advertisement

ಬೆಂಗಳೂರಿನಿಂದ 3 ಬೈಕ್‌ಗಳಲ್ಲಿ ಬಂದ ಐವರು ದುಷ್ಕರ್ಮಿಗಳು ಅರ್ಜುನ್‌ ಕಾರನ್ನು ಬೆನ್ನಟ್ಟಿದ್ದು ರಾಮನಗರ ಸಿಗ್ನಲ್‌ ದಾಟಿದ ಬಳಿಕ ದಾಳಿ ನಡೆಸಿದ್ದಾರೆ. ನಟ ಕಾರು ನಿಲ್ಲಿಸುತ್ತಿದ್ದಂತೆ ಹಲ್ಲೆಗೆ ಮುಂದಾಗಿದ್ದಾರೆ. ಆದರೆ ಸ್ಥಳೀಯರು ಜಮಾವಣೆಗೊಂಡ ಕಾರಣ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

ಅರ್ಜುನ್‌ ದೇವ್‌ ಅಭಿನಯಿಸಿರುವ ಯುಗಪುರುಷ ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು, ಚಿತ್ರದ ಪ್ರಚಾರ ಕಾರ್ಯಕ್ಕಾಗಿ ತೆರಳುತ್ತಿದ್ದರು.

ಸ್ಥಳಕ್ಕಾಗಮಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅರ್ಜುನ್‌ ದೇವ್‌ ಅವರನ್ನು ವಿಚಾರಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next