Advertisement

ಮಹಿಳೆಯಾಗಿರದಿದ್ದರೆ, ಕಚೇರಿಯಿಂದ ಹೊರಕ್ಕೆ ಎಳೆದು ಬಾರಿಸುತ್ತಿದ್ದೆವು!

11:46 PM Nov 29, 2019 | mahesh |

ತಿರುವಂತನಪುರ: ನೀನು ಮಹಿಳೆ ಎಂಬ ಕಾರಣಕ್ಕೆ ಸುಮ್ಮನಿದ್ದೀವಿ, ಇಲ್ಲವಾದರೆ ಕಚೇರಿಯಿಂದ ಹೊರಕ್ಕೆಳೆದುಕೊಂಡು ಬಂದು ಬಾರಿಸುತ್ತಿದ್ದೆವು…ಇಂತಹ ಬೆದರಿಕೆಗೊಳಗಾಗಿದ್ದು ತಿರುವಅನಂತರಪುರಂ ನ್ಯಾಯಾಧೀಶೆ ದೀಪಾ ಮೋಹನ್‌. ಬೆದರಿಕೆ ಹಾಕಿದ್ದು 12 ಮಂದಿ ವಕೀಲರು!

Advertisement

ಪ್ರಕರಣವೀಗ ಕೇರಳ ಹೈಕೋರ್ಟ್‌ ಮೆಟ್ಟಿಲೇರಿದೆ. ಕೇರಳ ನ್ಯಾಯಾಂಗ ಅಧಿಕಾರಿಗಳ ಸಂಘ ಈ ವಿಚಾರವನ್ನು ಪತ್ರಮುಖೇನ, ನ್ಯಾಯಾಲಯದ ಮುಖ್ಯ ನೋಂದಣಾಧಿಕಾರಿಗಳ ಗಮನಕ್ಕೆ ತಂದಿದೆ.

ಆರೋಪವೇನು?: ಪ್ರಕರಣವೊಂದರಲ್ಲಿ ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮದ ಚಾಲಕನೊಬ್ಬನಿಗೆ ಜಾಮೀನು ನೀಡಲು ನ್ಯಾಯಾಧೀಶೆ ದೀಪಾ ನಿರಾಕರಿಸಿದ್ದಾರೆ. ಇದರಿಂದ ಕ್ರುದ್ಧರಾದ 12 ವಕೀಲರು (ಬಾರ್‌ ಅಸೋಸಿಯೇಷನ್‌ ಅಧ್ಯಕ್ಷ, ಕಾರ್ಯದರ್ಶಿಯೂ ಸೇರಿ) ನ.27ರಂದು ನೇರವಾಗಿ ದೀಪಾ ಅವರ ಕಚೇರಿಯೊಳಗೇ ನುಗ್ಗಿದ್ದಾರೆ. ಜಾಮೀನು ಕೊಟ್ಟರೆ ಸರಿ, ಇಲ್ಲವಾದರೆ ಸರಿಯಿರುವುದಿಲ್ಲ, ಮಹಿಳೆ ಎಂಬ ಕಾರಣಕ್ಕೆ ಸುಮ್ಮನಿದ್ದೇವೆ ಎಂದು ಬೆದರಿಸಿದ್ದಾರೆ. ಈ ಬಗ್ಗೆ ಎಫ್ಐಆರ್‌ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next