Advertisement

ಕೋವಿಡ್ ಸಂಕಷ್ಟದಲ್ಲಿ ವಡ್ಡರಹಟ್ಟಿ ಕ್ಯಾಂಪಿನ ಮುಸ್ಲಿಂ ಯುವ ಬಳಗದಿಂದ ಅನ್ನಸಂತರ್ಪಣೆ

04:36 PM May 28, 2021 | Team Udayavani |

ಗಂಗಾವತಿ: ಅನ್ನಂ ಪರಬ್ರಹ್ಮಂ ಎನ್ನುವಂತೆ ಎಲ್ಲರೂ ದುಡಿಯುವುದು ಅನ್ನಕ್ಕಾಗಿಯೇ. ಕೋವಿಡ್ ಸಂಕಷ್ಟದಲ್ಲಿ ಸಂದರ್ಭದಲ್ಲಿ ಬಹಳಷ್ಟು ಮಂದಿ ಊಟಕ್ಕಾಗಿ ಪರದಾಟ ಪಡುತ್ತಿದ್ದಾರೆ. ವಡ್ಡರಹಟ್ಟಿ ಕ್ಯಾಂಪಿನ 4ನೇ ವಾರ್ಡಿನ ಮುಸ್ಲಿಂ ಸಮುದಾಯದ ಯುವಕರ ಬಳಗದಿಂದ ನಿರಂತರ ನಾಲ್ಕು ದಿನಗಳ ಕಾಲ ಲಾಕ್‍ಡೌನ್ ಸಂತ್ರಸ್ತರಿಗೆ ಅನ್ನಸಂತರ್ಪಣೆ ಮಾಡಿ ಹಸಿವು ಅನ್ನಕ್ಕೆ ಯಾವ ಬೇಧಭಾವವಿಲ್ಲ ಎಂದು ಸಾಬೀತು ಮಾಡಿದ್ದಾರೆ.

Advertisement

ಲಾಕ್‍ಡೌನ್ ಘೋಷಣೆಯಿಂದಾಗಿ ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಸಂಕಷ್ಟಕ್ಕೀಡಾಗಿರುವ ಸಂತ್ರಸ್ತರಿಗೆ ವಡ್ಡರಹಟ್ಟಿ ಕ್ಯಾಂಪಿನ ಮುಸ್ಲಿಂ ಸಮುದಾಯದ ಯುವಕರ ಬಳಗ ನಿರಂತರ ಅನ್ನಸಂತರ್ಪಣೆ ಸೇವೆ ಸಲ್ಲಿಸುತ್ತಿದೆ. ಫಲಾವ್, ವೆಜ್ ಬಿರಿಯಾನಿ, ಎಗ್ ಬಿರಿಯಾನಿ, ಪುಳಿಯೊಗರೆ ಹೀಗೆ ದಿನಾಲೂ ಒಂದೊಂದು ರೀತಿಯ ಆಹಾರವನ್ನು ತಯಾರಿಸಿ ಪೊಟ್ಟಣಗಳಲ್ಲಿ ತುಂಬಿಸಿ ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ನಿತ್ಯ ವಿತರಿಸುತ್ತಿದ್ದಾರೆ. ಈ ವೇಳೆ ಮಾತನಾಡಿದ ಯುವಕರು, ಬಡವ- ಶ್ರೀಮಂತ ಎನ್ನುವ ಬೇಧಭಾವವಿಲ್ಲದೇ ಎಲ್ಲಾ ವರ್ಗದ ಜನ ಲಾಕ್‍ಡೌನ್ ಸಮಯದಲ್ಲಿ ಸಂಕಷ್ಟಕ್ಕೀಡಾದ ಆಸ್ಪತ್ರೆ ಇನ್ನಿತರ ತುರ್ತು ಕಾರ್ಯಗಳಿಗೆ ಆಗಮಿಸಿದ ಜನರಿಗೆ ದುಡ್ಡು ಕೊಟ್ಟರೂ ಆಹಾರ ಸಿಗುತ್ತಿಲ್ಲ. ಲಾರಿ ಚಾಲಕರು ಬಹಳ ಸಂಕಷ್ಟಕ್ಕೀಡಾಗಿದ್ದಾರೆ. ಹೀಗಾಗಿ ಸಾಕಷ್ಟು ಜನ ಹಸಿವಿನಿಂದ ಬಳಲುವಂತಾಗಿದೆ. ಈ ನಿಟ್ಟಿನಲ್ಲಿ ನಮ್ಮ ಗೆಳೆಯರ ಬಳಗ ಐದು ದಿನಗಳ ಕಾಲ ಅನ್ನಸಂತರ್ಪಣೆ ಮಾಡಲು ನಿಶ್ಚಯಿಸಿದ್ದೇವೆ ಎಂದು ತಿಳಿಸಿದರು.

ಇದನ್ನೂ ಓದಿ;ಪಾಕಿಸ್ತಾನ ಸೇನೆಯ ನರಮೇಧ ಬಹಿರಂಗ  : ಹಿಂದೂ ಸಂಸ್ಥೆಗೆ ಪಾಕ್ ಬೆದರಿಕೆ ..!

ನಾಲ್ಕನೇ ವಾರ್ಡಿನ ಹಿರಿಯರು ಮತ್ತು ಮಹಿಳೆಯರು ಆಹಾರ ತಯಾರಿಕೆಗೆ ಸಹಕಾರ ನೀಡಿ ಯುವಕರ ಸಮಾಜಮುಖಿ ಕಾರ್ಯಕ್ಕೆ ಕೈಜೋಡಿಸಿದರು. ಈ ವೇಳೆ ವಾರ್ಡಿನ ಹಿರಿಯರು ಮತ್ತು ಯುವಕರು ಉಪಸ್ಥಿತರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next