Advertisement

ಸಕಾಲದಲ್ಲಿ ತುರ್ತು ವಾಹನ  ಸಿಗದೆ ಯುವಕ ಸಾವು

01:16 AM May 06, 2021 | Team Udayavani |

ಮಡಿಕೇರಿ: ಅನಾರೋಗ್ಯದಿಂದ ಬಳಲುತ್ತಿದ್ದ ಯುವಕನೊಬ್ಬ ಸಕಾಲದಲ್ಲಿ ತುರ್ತು ವಾಹನ ಸಿಗದೆ ನಡು ರಸ್ತೆಯಲ್ಲೇ ಕುಸಿದು ಬಿದ್ದು ಮೃತಪಟ್ಟ ಘಟನೆ ಸೋಮವಾರಪೇಟೆ ತಾಲೂಕಿನ ಬಜೆಗುಂಡಿ ಬಳಿ ನಡೆದಿದೆ.

Advertisement

ಬಜೆಗುಂಡಿ ನಿವಾಸಿ ಗೌರಿ ಅವರ ಪುತ್ರ ಮನು (23) ಮೃತಪಟ್ಟ ಯುವಕ. ಸೋಮವಾರಪೇಟೆಯ ಬಾರ್‌ನಲ್ಲಿ ಕೆಲಸ ಮಾಡುತ್ತಿದ್ದ ಮನು ಕಳೆದ ಎರಡು ದಿನಗಳಿಂದ ಜ್ವರ, ಕೆಮ್ಮು, ವಾಂತಿಯಿಂದ ಬಳಲುತ್ತಿದ್ದ. ಮಂಗಳವಾರ ಸೋಮವಾರಪೇಟೆ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿಕೊಂಡು ಬಂದಿದ್ದ ಎಂದು ಹೇಳಲಾಗಿದೆ.

ಅನಾರೋಗ್ಯದಿಂದ ಬಳಲುತ್ತಿದ್ದ ಮನುವಿನ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿ ಆಸ್ಪತ್ರೆಗೆ ಹೋಗುವಂತೆ ತಿಳಿಸಲಾಗಿತ್ತು. ಬುಧವಾರ ಬೆಳಗ್ಗೆ ಕೆಮ್ಮು ಜಾಸ್ತಿಯಾಗಿತ್ತು. ಆದರೆ ಮಡಿಕೇರಿ ಆಸ್ಪತ್ರೆಗೆ ದಾಖಲಾಗಲು ಸೂಕ್ತ ಸಮಯದಲ್ಲಿ ತುರ್ತು ವಾಹನ ಸಿಗಲು 3 ಗಂಟೆ ತಡವಾಗಿದ್ದು, ತೀವ್ರ ಬಳಲಿಕೆಯಿಂದ ಬಜೆಗುಂಡಿ ಮಸೀದಿ ಬಳಿ ಮನು ರಸ್ತೆಯಲ್ಲೇ ಕುಸಿದು ಬಿದ್ದಿದ್ದ. ಅನಂತರ ಸ್ಥಳಕ್ಕಾಗಮಿಸಿದ ಆ್ಯಂಬುಲೆನ್ಸ್‌ ವಾಹನದಲ್ಲಿ ಮಡಿಕೇರಿಗೆ ಸಾಗಿಸುವ ಸಂದರ್ಭ ಮಾರ್ಗ ಮಧ್ಯೆ ಮನು ಮೃತಪಟ್ಟಿದ್ದ.

Advertisement

Udayavani is now on Telegram. Click here to join our channel and stay updated with the latest news.

Next