Advertisement

ಯುವ ಪ್ರಣಾಳಿಕೆ

12:46 PM Mar 25, 2019 | keerthan |

ಲೋಕಸಭೆ ಚುನಾವಣೆಯ ಹಿನೆಲೆಯಲ್ಲಿ ಉದಯವಾಣಿ ಯುವ ಮತದಾರರಿಂದ ಆಹ್ವಾನಿಸಿದ್ದ ಯುವ ಪ್ರಣಾಳಿಕೆಗೆ 550ಕ್ಕೂ ಹೆಚ್ಚು ಮಂದಿ ತಮ್ಮ ಆಶಯಗಳನ್ನು ಕಳುಹಿಸಿದ್ದರು. ಅವೆಲ್ಲವುಗಳಲ್ಲಿನ ಆಯ್ದ ಅಂಶಗಳನ್ನು ಪತ್ರಿಕೆಯು ಯುವ ಪ್ರಣಾಳಿಕೆಯಾಗಿ ಪ್ರಸ್ತುತಪಡಿಸುತ್ತಿದೆ. ಜನಪ್ರತಿನಿಧಿಗಳು ಯುವ ಜನತೆಯ ಈ ಆಶೋತ್ತರಗಳನ್ನು ಗಮನಿಸಿ ಕಾರ್ಯನಿರತರಾಗಲಿ ಎಂಬುದೇ ಆಶಯ.

Advertisement

ದಕ್ಷಿಣ ಕನ್ನಡ-ಉಡುಪಿ ಜಿಲ್ಲೆಗಳಲ್ಲಿ ಉನ್ನತ ವ್ಯಾಸಂಗ ಮಾಡಿದವರ ಸಂಖ್ಯೆ ಸಾಕಷ್ಟಿದ್ದು, ಅವರು ವಲಸೆ ಹೋಗುವುದನ್ನು ತಪ್ಪಿಸಲು ಬೃಹತ್‌ ಉದ್ಯಮ, ಸಾಫ್ಟ್ ವೇರ್‌ ಕಂಪೆನಿಗಳನ್ನು ಸ್ಥಾಪಿಸಬೇಕು. ಗ್ರಾಮೀಣ ವಿದ್ಯಾರ್ಥಿಗಳಿಗೆ
ಸುಲಭವಾಗಿ ವೃತ್ತಿ ಶಿಕ್ಷಣದ ಅವಕಾಶ ಸಿಗುವಂತಾಗಬೇಕು. ಸರಕಾರದ ಯೋಜನೆ, ಸವಲತ್ತುಗಳ ಮಾಹಿತಿ ಕೇಂದ್ರವು ಗ್ರಾ. ಪಂ.ನಲ್ಲಿ
ಸ್ಥಾಪನೆಯಾಗಬೇಕು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲುತರಬೇತಿ ಕೇಂದ್ರ ಸ್ಥಾಪನೆಯಾಗಬೇಕು.

ಮುಖ್ಯವಾಗಿ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಬೇಕು. ಪ್ರತಿಯೊಬ್ಬ ವಿದ್ಯಾವಂತ ಪ್ರಜೆಗೂ ಅವರ ಯೋಗ್ಯತೆಗೆ ಅನುಸಾರವಾಗಿ ಉದ್ಯೋಗ ದೊರಕುವಂಥ ವಾತಾವರಣವನ್ನು ನಿರ್ಮಿಸಬೇಕು.

ನಿರುದ್ಯೋಗಿಗಳಿಗೆ ಮಾಸಿಕ ಭತ್ತೆ ನೀಡಿ ಸೋಮಾರಿಗಳನ್ನಾಗಿ ಮಾಡದೆ ತಮ್ಮ ಕ್ಷೇತ್ರದಲ್ಲಿನ ಸಂಪನ್ಮೂಲವನ್ನು ಬಳಸಿ ಉದ್ಯೋಗಿಗಳಾಗಿಸಲು ಪ್ರೋತ್ಸಾಹಿಸಬೇಕು. ರೈತರ ಸಾಲ ಮನ್ನಾಕ್ಕಿಂತ ಬಡ್ಡಿರಹಿತ ಸಾಲ ನೀಡಿ, ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಬೇಕು

ಉದ್ಯೋಗದಲ್ಲಿನ ಮೀಸಲು ತೆಗೆದು ಎಲ್ಲ ಪ್ರತಿಭಾವಂತರಿಗೆ ಅವಕಾಶ ಒದಗಿಸಬೇಕು. ಸಣ್ಣ ಕೈಗಾರಿಕೆಗೆ ಹೆಚ್ಚು ಪ್ರಾಮುಖ್ಯ ದೊರೆಯಬೇಕು.
ಕೃಷಿಯಲ್ಲಿನ ನೂತನ ತಂತ್ರಜ್ಞಾನ ಹಳ್ಳಿಯ ಮೂಲೆ ಮೂಲೆಗೆ ತಲುಪುವಂತಾಗಬೇಕು.

Advertisement

ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರಿಗೆ ಪ್ರಾಧಾನ್ಯ ನೀಡಬೇಕು. ಶಿಕ್ಷಣವನ್ನು ರಾಷ್ಟ್ರೀಕರಣಗೊಳಿಸಿ ಎಲ್ಲರಿಗೂ ಪ್ರೌಢಶಾಲಾ ಶಿಕ್ಷಣದವರೆಗೆ ಏಕರೀಯ ಶಿಕ್ಷಣ ವ್ಯವಸ್ಥೆ ಜಾರಿಗೊಳಿಸಬೇಕು. ಶಿಕ್ಷಣ ವ್ಯವಸ್ಥೆಯನ್ನು ಖಾಸಗಿ ಕಪಿಮುಷ್ಟಿಯಿಂದ ಮುಕ್ತಗೊಳಿಸಬೇಕು. ಸಾರಿಗೆ ವ್ಯವಸ್ಥೆಯಲ್ಲಿ ಆಳವಾಗಿ ಬೇರುಬಿಟ್ಟ ಭ್ರಷ್ಟಾಚಾರವನ್ನು ಬಡತನ ರೇಖೆಗಿಂತ ಕೆಳಗಿರುವ ಕಿತ್ತೂಗೆಯಬೇಕು

ಬಡತನ ರೇಖೆಗಿಂತ ಕುಟುಂಬಗಳಿಗೆ ಮಾತ್ರ ಮೀಸಲು ಪದ್ಧತಿ ಅನ್ವಯಿಸಿ ತಿದ್ದುಪಡಿ ತರಬೇಕು. ಎಲ್ಲ ಪ್ರತಿಭಾವಂತರಿಗೂ ಸಮಾನ ಅವಕಾಶವನ್ನು ಕಲ್ಪಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಶೈಕ್ಷಣಿಕ ಸಂಸ್ಥೆಯಲ್ಲಿ ಎಲ್ಲರ ಹಿತದೃಷ್ಟಿಗಾಗಿ ಸಿಸಿಟಿವಿ ಅಳವಡಿಸಬೇಕು. ಎಲ್ಲ ಹಳ್ಳಿಗಳಿಗೂ ಮೂಲ ಸೌಲಭ್ಯ ದೊರಕಬೇಕು.

ಯುವಜನರಿಗೆ ಉತ್ತಮ ಶಿಕ್ಷಣ ಕಲ್ಪಿಸಲು ಆದ್ಯತೆ ನೀಡಬೇಕು. ಗ್ರಾಮೀಣ ಭಾಗದಲ್ಲಿ ಹೆಚ್ಚು ಕಂಪೆನಿಗಳನ್ನು ಸ್ಥಾಪಿಸಿ ಉದ್ಯೋಗ ಒದಗಿಸಬೇಕು. ಪ್ರತಿ ತಾಲೂಕುಗಳಲ್ಲಿಯೂ ಸುಸಜ್ಜಿತ ಉನ್ನತ ಮಟ್ಟದ ಗ್ರಂಥಾಲಯಗಳನ್ನು ಸ್ಥಾಪಿಸುವುದು.

ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಲು ಶಿಸ್ತುಕ್ರಮ ಕೈಗೊಳ್ಳಬೇಕು. ಶಾಲಾ- ಕಾಲೇಜುಗಳ ಮೂಲಸೌಕರ್ಯ ಹೆಚ್ಚಿಸಬೇಕು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ಬಸ್‌ ಪಾಸ್‌, ಶಿಷ್ಯವೇತನ ನೀಡಬೇಕು. ಹೆಣ್ಣುಮಕ್ಕಳ ಉನ್ನತ ಶಿಕ್ಷಣಕ್ಕೆ ಒತ್ತು ನೀಡಬೇಕು. ಸ್ಥಳೀಯವಾಗಿ ಕೈಗಾರಿಕೆ ಸ್ಥಾಪಿಸಬೇಕು.

ಗ್ರಾಮದ ಹಲವು ಪ್ರದೇಶಗಳಲ್ಲಿ ಯಾವುದೇ ದೂರವಾಣಿ ಸಂಪರ್ಕದ
ಸ್ಥಾವರಗಳಿಲ್ಲ. ಈ ಸಮಸ್ಯೆ ನಿವಾರಣೆಯಾಗಬೇಕು. ಗ್ರಾಮದ ಸರಕಾರಿ
ಶಾಲೆಗಳಲ್ಲಿನ ಶಿಕ್ಷಕರ ಕೊರತೆನಿವಾರಿಸಬೇಕು.

ಮುಖ್ಯವಾಗಿ ಯವಜನರಿಗೆ ಉದ್ಯೋಗ ಅವಕಾಶ ಮತ್ತು ಕೌಶಲಾಭಿವೃದ್ಧಿ ಒದಗಿಸಬೇಕು. ಗ್ರಾಮೀಣ ಭಾಗಕ್ಕೆ ಹೆಚ್ಚಿನ ಸಾರಿಗೆ ಸೌಲಭ್ಯ ಮತ್ತು ಸರಕಾರಿ
ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿ ಉತ್ತಮ ಆಡಳಿತ ನೀಡಬೇಕು.

ಶೈಕ್ಷಣಿಕ ಸಾಲದ ಬಡ್ಡಿ ದರ ಹೆಚ್ಚಿದ್ದು, ಅದನ್ನು ಕಡಿತಗೊಳಿಸಬೇಕು. ಯುವಜನತೆಗೆ ಉದ್ಯೋಗ ತರಬೇತಿ, ಉದ್ಯೋಗ ಭದ್ರತೆ, ಆಯಾ ವಿದ್ಯೆ, ವೃತ್ತಿಗೆ ಸಮಾನ ಸಾಮಾಜಿಕ ಗೌರವದ ಉದ್ಯೋಗ ದೊರಕುವಂತೆ ಮಾಡಬೇಕು.

ಯುವ ಜನತೆಗೆ ಸ್ವಂತ ಉದ್ಯೋಗಕ್ಕೆ ಉತ್ತೇಜನ, ಕ್ಲಪ್ತ ಸಮಯದಲ್ಲಿ ಸಾಲ ಸಿಗುವಂತೆ ಮಾಡಬೇಕು. ಪ್ರತಿಭಾ ಪಲಾಯನಕ್ಕೆ ತಡೆ ಹಾಕಿ, ಸಂಶೋಧನೆಗೆ
ಮಹತ್ವ ಕೊಡಬೇಕು. ದೇಶಾದ್ಯಂತ ಸಂಶೋಧನ ಕೇಂದ್ರ ಸ್ಥಾಪಿಸಬೇಕು.

ಕ್ರೀಡೆಗಳಿಗೆ ಉತ್ತೇಜನ ನೀಡಿ, ಯುವ ಜನರನ್ನು ಅಂತರ್ಜಾಲದ ಮಾಯೆಯಿಂದ ಪಾರು ಮಾಡಬೇಕು. ಕ್ರೀಡಾಪಟುಗಳಿಗೆ ಸೌಲಭ್ಯಗಳನ್ನು
ಒದಗಿಸಬೇಕು. ಸಂಚಾರದಲ್ಲಿ ಶಿಸ್ತು ಮೂಡಿಸಿ, ಟ್ರಾಕ್‌ ಜಾಮ್‌ ನಿಯಂತ್ರಿಸಬೇಕು.

ರೈತರಿಗೆ ಶೇ. 50 ಸಬ್ಸಿಡಿ ದರದಲ್ಲಿ ಅಗತ್ಯ ಕೃಷಿ ಉಪಕರಣ, ಗೊಬ್ಬರ ವಿತರಣೆ ಆಗಬೇಕು. “ಒಂದು ಮನೆಗೆ – ಒಂದು ಉದ್ಯೋಗ’ ಯೋಜನೆ ಜಾರಿಯಾಗಬೇಕು. ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಶುಲ್ಕವನ್ನು ಸರಕಾರವೇ ಭರಿಸಬೇಕು.

ಸೊದ್ಯೋಗಕ್ಕೆ ಪ್ರೋತ್ಸಾಹ ನೀಡುವುದು. ಉನ್ನತ ವ್ಯಾಸಂಗಕ್ಕೆ ಸರಕಾರ ಬಡ್ಡಿರಹಿತ ಸಾಲ ನೀಡಬೇಕು. ಅಮಲುಪದಾರ್ಥಗಳಿಗೆ ಕಡಿವಾಣ ಹಾಕಿ,
ಕೌನ್ಸೆಲಿಂಗ್‌ ಕೇಂದ್ರಗಳ ಮೂಲಕ ಯುವಜನರು ದಾರಿ ತಪ್ಪದಂತೆ ನೋಡಿಕೊಳ್ಳಬೇಕು. ಯುವಕರನ್ನು ಕೃಷಿಯತ್ತ ಆಕರ್ಷಿಸಲು ಜಿಲ್ಲಾ
ಮಟ್ಟದಲ್ಲಿ ಕೃಷಿ ಕಾಲೇಜುಗಳನ್ನು ಸ್ಥಾಪಿಸಬೇಕು. ಕೃಷಿಯಲ್ಲ ಆಧುನಿಕತೆಯನ್ನು ರೂಢಿಸಿಕೊಳ್ಳಲು ಪ್ರೇರಣೆ ನೀಡಬೇಕು. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡಬೇಕು.

ಎಲ್ಲ ಧರ್ಮಗ್ರಂಥಗಳ ಬೋಧನೆಯನ್ನು ಶಾಲೆಗಳ ಪಠ್ಯದಲ್ಲಿ ಸೇರಿಸಬೇಕು. ಖಾಸಗಿ ಶಾಲೆಗಳಲ್ಲಿ ಕಡಿಮೆ ದರದಲ್ಲಿ ಗುಣಮಟ್ಟದ ಶಿಕ್ಷಣ ಸಿಗಬೇಕು. ಸೈನಿಕ ನಿಧಿಗೆ ಎಲ್ಲರೂ ಹಣ ನೀಡುವಂತಾಗಬೇಕು.

ಪ್ರಾಥಮಿಕ ಶಿಕ್ಷಣದಿಂದಲೇ ಏಕರೂಪ ಶಿಕ್ಷಣ (ಕೇಂದ್ರೀಯ ವಿದ್ಯಾಲಯ ಮಾದರಿ) ಸಿಗುವಂತಾಗಲು ಪ್ರಣಾಳಿಕೆ ರೂಪಿಸಬೇಕು. ಪದವಿಯಲ್ಲಿ ವೃತ್ತಿ ಆಧರಿತ ಶಿಕ್ಷಣಕ್ಕೆ ಒತ್ತು, ಕೌಶಲಾಭಿವೃದ್ಧಿಗೆ ಆದ್ಯತೆ ನೀಡಬೇಕು.

ಪ್ರತಿ ಕ್ಷೇತ್ರದಲ್ಲೂ ಯುವ ಸದನವನ್ನು ನಿರ್ಮಿಸಿ ಪ್ರತಿ ತಿಂಗಳೂ ಸ್ಥಳೀಯ ಯುವ ಜನರ ಹಾಗೂ ಸ್ಥಳೀಯರ ಸಮಸ್ಯೆ ಕುರಿತು ಚರ್ಚಿಸಿ ಪರಿಹಾರ ಕ್ರಮ ಕೈಗೊಳ್ಳಬೇಕು. ಸೋಶಿಯಲ್‌ ನೆಟÌರ್ಕಿಂಗ್‌ ನಲ್ಲಿ ಕ್ಷೇತ್ರದ ಕಾರ್ಯವೈಖರಿ ಪ್ರಕಟಿಸಬೇಕು.

ಮೀಸಲಾತಿ ಬೇಡ, ವಿದ್ಯಾರ್ಹತೆಗೆ ತಕ್ಕುದಾದ ಉದ್ಯೋಗ ನೀಡಬೇಕು. ಭ್ರಷ್ಟಾಚಾರ ಮತ್ತು ಮಾದಕ ವಸ್ತುಗಳ ವಿರುದ್ಧ ಕಠಿನ ಕ್ರಮ
ತೆಗೆದುಕೊಳ್ಳಬೇಕು. ಜನಪ್ರತಿನಿಧಿಗಳಿಗೆ ಕನಿಷ್ಠ ವಿದ್ಯಾರ್ಹತೆ ಇರಬೇಕು.

ನಿರುದ್ಯೋಗ ಸಮಸ್ಯೆಗೆ ಕಡಿವಾಣ ಹಾಕಲು ಉದ್ಯೋಗ ಸೃಷ್ಟಿಗೆ ಒತ್ತು ನೀಡಬೇಕು. ಬಿಪಿಎಲ್‌ ಕಾರ್ಡ್‌ದಾರರ ಉನ್ನತ ಶಿಕ್ಷಣಕ್ಕೆ ಶುಲ್ಕ ರಿಯಾಯಿತಿ
ನೀಡಬೇಕು. ಗಂಭೀರ ಕಾಯಿಲೆಗಳಿಗೆ 5 ಲಕ್ಷ ರೂ. ತನಕ ಚಿಕಿತ್ಸಾ ವೆಚ್ಚ ಭರಿಸಬೇಕು.

ಉದ್ಯೋಗದಿಂದ ಮಾತ್ರ ಆರ್ಥಿಕ, ಸಾಮಾಜಿಕ,  ಶೈಕ್ಷಣಿಕ ಸಮಾನತೆ ಸಾಧ್ಯ. ಆ ನಿಟ್ಟಿನಲ್ಲಿ ಸಣ್ಣ-ಮಧ್ಯಮ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡಬೇಕು. ಯುವ ಸ್ಟಾರ್ಟ್‌ ಅಪ್‌ಗ್ಳಿಗೆ ಒತ್ತು ಹಾಗೂ ಸೌಲಭ್ಯಗಳನ್ನು ನೀಡಬೇಕು.

ಅರಣ್ಯ ಸಂರಕ್ಷಣೆ, ಹಣ್ಣಿನ ಗಿಡಗಳ ಪೋಷಣೆಗೆ ಆದ್ಯತೆ ನೀಡಬೇಕು. ಕಾಡ್ಗಿಚ್ಚಿನಿಂದ ಅರಣ್ಯಗಳನ್ನು ರಕ್ಷಿಸಲು ನಿಗಾ ವಹಿಸಬೇಕು. ಶಾಲೆ-ಕಾಲೇಜುಗಳಲ್ಲಿ ಅರಣ್ಯ ಸಂರಕ್ಷಣೆಗೆ ತರಬೇತಿ ನೀಡಬೇಕು.

ರೈತ ಬೆಳೆದ ಕೃಷಿ ಉತ್ಪನ್ನ ನೇರವಾಗಿಮಾರಾಟ ಮಾಡಲು ವ್ಯವಸ್ಥೆ ಕಲ್ಪಿಸಬೇಕು. ಪ್ರತಿ ಹಳ್ಳಿಯ ಹೆಣ್ಣು ಮಕ್ಕಳು ಆರ್ಥಿಕವಾಗಿ ಸದೃಢವಾಗುವ ವ್ಯವಸ್ಥೆಯಾಗಬೇಕು. ಯುವ ಜನತೆಗೆ ಸ್ವ ಉದ್ಯೋಗ ಬಗ್ಗೆ ಮಾಹಿತಿ ಕೊಡಬೇಕು.

ಹೆಮ್ಮರಗಳ ನಾಶಕ್ಕೆ ಕಡಿವಾಣ ಹಾಕಬೇಕು. ಸರಕಾರಿ ಶಾಲೆಗಳಲ್ಲಿ ಉತ್ತಮ ಇಂಗ್ಲಿಷ್‌ ಅಧ್ಯಾಪಕರು, ಗ್ರಂಥಾಲಯ, ಮೂಲಸೌಕರ್ಯ ಕಲ್ಪಿಸಬೇಕು.
ಸಮಾಜ ಸೇವೆಗೆ ಮುಂದಾಗುವ ಯುವ ಸಂಘಟನೆಗಳಿಗೆ ಪ್ರೋತ್ಸಾಹ ದೊರೆಯಬೇಕು.

Advertisement

Udayavani is now on Telegram. Click here to join our channel and stay updated with the latest news.

Next