Advertisement

ಜನರೇಟರ್ ಗೆ ಸಿಲುಕಿ ಯುವಕನ ಕೈ ತುಂಡು

09:46 AM Sep 09, 2019 | Hari Prasad |

ರಾಮನಗರ: ಗಣಪತಿ ಮೂರ್ತಿ‌ ವಿಸರ್ಜನೆ ವೇಳೆ ಜನರೇಟರ್ ಗೆ ಸಿಲುಕಿ ಯುವಕನೋರ್ವನ ಬಲ ಕೈ ತುಂಡಾಗಿರುವ ಘಟನೆ ನಡೆದಿದೆ. ರಾಮನಗರದ ರಂಗರಾಯರದೊಡ್ಡಿ ಕೆರೆ ಬಳಿ ಈ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ.

Advertisement

ಕೈ ಕಳೆದುಕೊಂಡಿರುವ ಯುವಕನನ್ನು 24 ವರ್ಷದ ನರೇಂದ್ರ ಎಂದು ಗುರುತಿಸಲಾಗಿದೆ. ಬಲ ಕೈಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು ಯುವಕನನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ನಗರದ ಚಾಮುಂಡೇಶ್ವರಿ ಬಡಾವಣೆಯಲ್ಲಿ ಪ್ರತಿಷ್ಟಾಪಿಸಲಾಗಿದ್ದ ಗಣಪತಿ ಮೂರ್ತಿಯನ್ನು ಶನಿವಾರ ರಾತ್ರಿ‌ ವಿಸರ್ಜಿಸುವ ಮುನ್ನ ಈ ಘಟನೆ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next