Advertisement

ಸೇತುವೆ ಮೇಲಿಂದ ಹಾರಿ ಈಜಲು ಮುಂದಾದ ಯುವಕ ಕಬಿನಿಯಲ್ಲಿ ಕಣ್ಮರೆ

01:03 PM Jul 11, 2018 | Team Udayavani |

ನಂಜನಗೂಡು: ರೈಲ್ವೇ ಸೇತುವೆಯಿಂದ ತುಂಬಿ ಹರಿಯುತ್ತಿರುವ ಕಬಿನಿ ನದಿಗೆ ಹಾರಿ ಈಜುವ ಸಾಹಸಕ್ಕೆ ಯುವಕರು ಮುಂದಾಗಿದ್ದು,ಆ ಪೈಕಿ ಓರ್ವ ನಾಪತ್ತೆಯಾಗಿರುವ ಘಟನೆ ಬುಧವಾರ ನಡೆದಿದೆ. 

Advertisement

ನಾಲ್ವರು ಯುವಕರು ಈಜಲೆಂದು ಸೇತುವೆಯಿಂದ ನೀರಿಗೆ ಧುಮುಕಿದ್ದು  ಮುದಾಫಿರ್‌ ಷರೀಫ್ ಎನ್ನುವ ಯುವಕ ದಡ ಸೇರಲಾಗದೆ ನಾಪತ್ತೆಯಾಗಿದ್ದಾನೆ. 

ಸ್ಥಳಕ್ಕಾಗಮಿಸಿರುವ ಅಗ್ನಿ ಶಾಮಕದಳ, ಈಜು ಪರಿಣಿತರು ಮುದಾಫಿರ್‌ಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿದ್ದಾರೆ. 

ಕೆಲ ದಿನಗಳ ಹಿಂದೆ ಬಂಟ್ವಾಳದ ಪಾಣೆ ಮಂಗಳೂರು ಹಳೆ ಸೇತುವೆ ಮೇಲಿಂದ ಹತ್ತಕ್ಕೂ ಹೆಚ್ಚು  ಯುವಕರು ನೀರಿಗೆ ಧುಮುಕಿ ಈಜುತ್ತಿದ್ದ ವಿಡಿಯೋ ವೈರಲ್‌ ಆಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next