Advertisement

ಶಂಕಿತ ಡೆಂಗ್ಯೂ ಜ್ವರಕ್ಕೆ ಯುವಕ ಬಲಿ

05:32 PM Aug 05, 2019 | Hari Prasad |

ಬಂಟ್ವಾಳ : ಜ್ವರದ ಕಾರಣದಿಂದ ಆಸ್ಪತ್ರೆಗೆ ದಾಖಲುಗೊಂಡಿದ್ದ ಯುವಕನೋರ್ವ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟ ಘಟನೆ ವರದಿಯಾಗಿದೆ. ಬಿ.ಸಿ.ರೋಡು ಕೈಕಂಬ ಸಮೀಪದ ತಲಪಾಡಿ ನಿವಾಸಿ ಪ್ರಶಾಂತ್ (39) ಎಂಬವರೇ ಜ್ವರದಿಂದ ಮೃತಪಟ್ಟ ದುರ್ದೈವಿಯಾಗಿದ್ದಾರೆ.

Advertisement

ಡೆಂಗ್ಯೂ ಜ್ವರದ ಕಾರಣದಿಂದಲೇ ಪ್ರಶಾಂತ್ ಮೃತಪಟ್ಟಿರಬಹುದೆಂದು ಇದೀಗ ಶಂಕಿಸಲಾಗುತ್ತಿದೆ. ಕಳೆದ ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಇವರನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ತಾಲೂಕಿನಲ್ಲಿ ಶಂಕಿತ ಡೆಂಗ್ಯು ಪ್ರಕರಣಕ್ಕೆ ಇದೇ ಮೊದಲ‌ ಬಲಿಯಾಗಿದ್ದು, ಈ ಹಿಂದೆ ಒಟ್ಟು 39 ಡೆಂಗ್ಯು ಪ್ರಕರಣಗಳು ಕಂಡುಬಂದಿರುವ ಕುರಿತು ಆರೋಗ್ಯ ಇಲಾಖೆ ಮಾಹಿತಿ ನೀಡಿತ್ತು.

ಇವರ ತಂದೆ ತಾಯಿ ಈ ಹಿಂದೆಯೇ ಮೃತ ಪಟ್ಟಿದ್ದು, ಇಬ್ಬರು ಸಹೋದರಿಯರು ಹಾಗೂ ಮೂವರು ಸಹೋದರರನ್ನು ಅಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next