Advertisement

ಸಚಿವ ಸೋಮಣ್ಣ ಜತೆ ಯುವಕನ ಸಂಭಾಷಣೆ ಆಡಿಯೋ ವೈರಲ್‌

08:13 AM May 16, 2020 | Lakshmi GovindaRaj |

ರಾಯಚೂರು: ವಸತಿ ಸಚಿವ ವಿ.ಸೋಮಣ್ಣ ಅವರ ಜತೆ ಸಿಂಧನೂರು ತಾಲೂಕಿನ ಧಡೇಸೂಗೂರು ಗ್ರಾಮದ ಯುವಕ ನಡೆಸಿದ ದೂರವಾಣಿ ಸಂಭಾಷಣೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.ಸಚಿವರಿಗೆ ಕರೆ ಮಾಡಿದ ಯುವಕ  ತಮ್ಮ ಕ್ಷೇತ್ರದಲ್ಲಿ ವಸತಿ ಯೋಜನೆಯಡಿ ಅಕ್ರಮವಾಗಿದೆ ಎಂದು ಗಮನ ಸೆಳೆದಿದ್ದಾನೆ. ಆಗ ಸಚಿವರು ಈಗ ಯಾವುದೇ ಮನೆಗಳಿಗೂ ಹಣ ನೀಡಲಾ ಗುವುದಿಲ್ಲ.

Advertisement

ನಾವು ಬಂದ ಮೇಲೆ ಯಾರಿಗೂ ಮನೆಗಳನ್ನು ಹಂಚಿಕೆ ಮಾಡಿಲ್ಲ. ಹಿಂದೆ  ಅನರ್ಹರಿಗೆ ಹಂಚಿಕೆ ಮಾಡಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ಬಳಿ ಮಾತನಾಡಿ. ಈಗಾಗಲೇ ಇಂಥ ಪ್ರಕರಣಗಳಲ್ಲಿ ಎಂಟು ಲಕ್ಷ ಮನೆಗಳ ಹಂಚಿಕೆಯನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ. ಅಲ್ಲಿಗೆ ಸುಮ್ಮನಾಗದ ಯುವಕ  ಉಳ್ಳವರಿಗೇ ಅದರಲ್ಲೂ ಹಿಂದೆ ಪಡೆದವರಿಗೇ ಮತ್ತೆ ಮನೆಗಳನ್ನು ನೀಡಿದ್ದಾರೆ.

ಪಂಚಾಯತ್‌ನಿಂದ ಇಂಥ ಪ್ರಕರಣಗಳನ್ನು ಪತ್ತೆ ಹಚ್ಚಿ ಪಟ್ಟಿ ಮಾಡಿ ಕೊಡುತ್ತೇವೆ ಎಂದು ಪ್ರತ್ಯುತ್ತರ ನೀಡಿದಾಗ; ಹಾಗಿದ್ದರೆ ಪಟ್ಟಿ ಮಾಡಿಕೊಂಡು ಬಾ.  ನಿನಗೆ ಸನ್ಮಾನ ಮಾಡುತ್ತೇನೆ. ಬಸ್‌ ಪ್ರಯಾಣ ದರ ಕೂಡ ನೀಡುತ್ತೇನೆ. ಅನರ್ಹರಿಗೆ ಮನೆಗಳ ಹಂಚಿಕೆ ರದ್ದು ಮಾಡುತ್ತೇನೆ ಎಂದು ಸಚಿವರು ಹೇಳಿದ್ದಾರೆ. ಆಗ ಯುವಕ ಸನ್ಮಾನವೂ ಬೇಡ, ಪ್ರಯಾಣದ ಹಣವೂ ಬೇಡ. ಅರ್ಹರಿಗೆ  ಮನೆಗಳನ್ನುಕೊಟ್ಟರೆ ಸಾಕು ಎಂದಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next