Advertisement

ಸಿಬಿಐ ಅಧಿಕಾರಿಗೆ ರಜೆ;ಯುವ ಕಾಂಗ್ರೆಸ್‌ ಪ್ರತಿಭಟನೆ

11:44 AM Oct 27, 2018 | Team Udayavani |

ಬೀದರ: ಕೇಂದ್ರ ಸರ್ಕಾರದ ರಫೆಲ್‌ ಹಗರಣ ಕುರಿತು ಉನ್ನತ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಯನ್ನು ರಜೆ ಮೇಲೆ ಕಳುಹಿಸಿ ಕೇಂದ್ರ ಸರ್ಕಾರ ಅಧಿಕಾರ ದುರುಪಯೋಗ ಪಡಿಸಿಕೊಂಡಿದೆ ಎಂದು ಆರೋಪಿಸಿ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್‌ ಸಮಿತಿ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

Advertisement

ರೆಫೆಲ್‌ ಡೀಲ್‌ ಬಗೆಗಿನ ಮುಕ್ತ ತನಿಖೆಯನ್ನು ನಿಯಂತ್ರಿಸುವ ಮತ್ತು ನಿರ್ವಹಿಸುವ ಉದ್ದೇಶದಿಂದ ಪ್ರಧಾನಮಂತ್ರಿ ಅವರು ರಾತ್ರಿ ಎರಡು ಗಂಟೆಗೆ ಸಿಬಿಐನ ನಿರ್ದೇಶಕ ಅಲೋಕ ವರ್ಮಾ ಅವರನ್ನು ಬಲವಂತದಿಂದ ರಜೆ ಮೇಲೆ ಕಳುಹಿಸಿದ್ದು, ಅವರ ನಿರ್ದೇಶಕರ ಸ್ಥಾನಕ್ಕೆ ಹಂಗಾಮಿ ನಿರ್ದೇಶಕರನ್ನು ನೇಮಕ ಮಾಡಲಾಗಿದೆ. ಪ್ರಧಾನಿಗಳು ತಮ್ಮ ಅಧಿಕಾರ ದುರುಪಯೋಗ ಪಡೆಸಿಕೊಂಡು ಸಿಬಿಐ ದುರ್ಬಲ ತನಿಖಾ ಸಂಸ್ಥೆಯಾಗಿ ಪರಿವರ್ತಿಸುವುದನ್ನು ಯುವ ಕಾಂಗ್ರೆಸ್‌ ಖಂಡಿಸುತ್ತದೆ ಎಂದು ಪ್ರತಿಭಟನಾ ನಿರತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳು ಕೂಗಿದರು.

ನಗರದ ಅಂಬೇಡ್ಜರ್‌ ವೃತ್ತದಿಂದ ಪ್ರಾರಂಭಗೊಂಡ ಪ್ರತಿಭಟನಾ ರ್ಯಾಲಿ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಿದರು. ಜಿಲ್ಲಾಧ್ಯಕ್ಷ ಫರಿದ್‌ ಉಲ್ಲಾಖಾನ್‌, ಸುಧಾಕರ, ಸಾಜೀದ್‌ ಅಲೀ ಸೇರಿದಂತೆ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next