Advertisement

ಉಡುಪಿ ಜಿಲ್ಲಾ ಯುವ ಕಾಂಗ್ರೆಸ್‌ ಪ್ರತಿಭಟನೆ

07:23 PM Aug 03, 2017 | Team Udayavani |

ಉಡುಪಿ: ಕಾಂಗ್ರೆಸ್‌ ಮುಖಂಡ ಡಿ.ಕೆ. ಶಿವಕುಮಾರ್‌ ಅವರ ವಿರುದ್ಧ ನಡೆದಿರುವ ಆದಾಯ ತೆರಿಗೆ (ಐಟಿ) ದಾಳಿಯನ್ನು ಖಂಡಿಸಿ ಜಿಲ್ಲಾ ಯುವ ಕಾಂಗ್ರೆಸ್‌ ವತಿಯಿಂದ ಕ್ಲಾಕ್‌ ಟವರ್‌ ಬಳಿ ಬೃಹತ್‌ ಪ್ರತಿಭಟನೆ ಗುರುವಾರ ನಡೆಯಿತು. ಕೇಂದ್ರ ಸರಕಾರದ ದ್ವೇಷದ ರಾಜಕಾರಣ ಖಂಡನೀಯ ಎಂದು ಕಾಂಗ್ರೆಸ್‌ ನಾಯಕರು ಹೇಳಿದರು.

Advertisement


ಯುವಕಾಂಗ್ರೆಸ್‌ ಜಿಲ್ಲಾಧ್ಯಕ್ಷ ವಿಶ್ವಾಸ್‌ ವಿ. ಅಮೀನ್‌, ಉಡುಪಿ ವಿಧಾನಸಭಾ ಕ್ಷೇತ್ರ ಪ್ರಚಾರ ಸಮಿತಿ ಅಧ್ಯಕ್ಷ ಪಿ. ಅಮೃತ್‌ ಶೆಣೈ, ರಾಜ್ಯ ಅಲ್ಪಸಂಖ್ಯಾಕ ನಿಗಮದ ಅಧ್ಯಕ್ಷ ಎಂ.ಎ. ಗಫ‌ೂರ್‌, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ. ನರಸಿಂಹಮೂರ್ತಿ, ವಕ್ತಾರ ಭಾಸ್ಕರ್‌ ರಾವ್‌ ಕಿದಿಯೂರು, ಉಡುಪಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸತೀಶ್‌ ಅಮೀನ್‌ ಪಡುಕೆರೆ, ಇಂಟಕ್‌ ಜಿಲ್ಲಾಧ್ಯಕ್ಷ ಗಣೇಶ್‌ ಎನ್‌. ಕೋಟ್ಯಾನ್‌ ಪಡುಬಿದ್ರಿ, ಕಾಪು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ನವೀನ್‌ಚಂದ್ರ ಜೆ. ಶೆಟ್ಟಿ, ಉಡುಪಿ ನಗರಸಭೆ ಸದಸ್ಯರಾದ ಕೆ. ಜನಾರ್ದನ ಭಂಡಾರ್ಕರ್‌, ರಮೇಶ್‌ ಕಾಂಚನ್‌, ಗಣೇಶ್‌ ನೆರ್ಗಿ, ನಾರಾಯಣ ಕುಂದರ್‌, ಮಹಿಳಾ ಮುಂದಾಳುಗಳಾದ ವೆರೋನಿಕಾ ಕರ್ನೇಲಿಯೋ, ಡಾ| ಸುನೀತಾ ಶೆಟ್ಟಿ, ಜ್ಯೋತಿ ಹೆಬ್ಟಾರ್‌, ಚಂದ್ರಿಕಾ ಶೆಟ್ಟಿ, ಮುಖಂಡರಾದ ಹರೀಶ್‌ ಕಿಣಿ ಅಲೆವೂರು, ಎಂ.ಪಿ. ಮೊದಿನಬ್ಬ, ಕಿಶನ್‌ ಹೆಗ್ಡೆ ಕೊಳ್ಕೆಬೈಲು, ದಿನೇಶ್‌ ಪುತ್ರನ್‌, ದಿವಾಕರ ಕುಂದರ್‌, ಮುರಲಿ ಶೆಟ್ಟಿ ಇಂದ್ರಾಳಿ, ಅಶೋಕ್‌ ಕುಮಾರ್‌ ಕೊಡವೂರು, ಪ್ರಖ್ಯಾತ್‌ ಶೆಟ್ಟಿ,  ಕೀರ್ತಿ ಶೆಟ್ಟಿ, ಯತೀಶ್‌ ಕರ್ಕೇರ, ದೀಪಕ್‌ ಕುಮಾರ್‌ ಎರ್ಮಾಳು, ಪ್ರಶಾಂತ್‌ ಪೂಜಾರಿ, ಹಬೀಬ್‌ ಆಲಿ, ಮೆಲ್ವಿನ್‌, ಪ್ರಭಾಕರ ಆಚಾರ್ಯ, ಹಸನ್‌ ಅಜ್ಜರಕಾಡು, ಇಮ್ರಾನ್‌, ರಿಯಾಜ್‌ ಪಳ್ಳಿ ಪಾಲ್ಗೊಂಡಿದ್ದರು.

Photos and Video: ಚೇತನ್‌ ಪಡುಬಿದ್ರೆ


Advertisement

Udayavani is now on Telegram. Click here to join our channel and stay updated with the latest news.

Next