Advertisement

ನಮ್ಮ,ನಿಮ್ಮ ಬಣ್ಣ, ಬಣ್ಣದ ಭವಿಷ್ಯ ಹೀಗಿದೆ

04:00 AM Apr 15, 2017 | |

 ಬಣ್ಣಗಳು ನಮ್ಮ ಭವಿಷ್ಯದೊಂದಿಗೆ ಅದ್ಭುತ ಪಾತ್ರ ವಹಿಸುತ್ತದೆ ಎಂಬುದು ಆಶ್ಚರ್ಯವೆನಿಸಬಹುದು. ಆದರೆ ಸತ್ಯವಾದ ಮಾತಾಗಿದೆ. ಬಹುತೇಕವಾಗಿ ನಾವು ದೇವರುಗಳ ವಿಚಾರದಲ್ಲೂ ಈ ಸತ್ಯವನ್ನು ಗಮನಿಸಬೇಕು. ಗಣಪತಿಯನ್ನು ಗಮನಿಸುವುದಾದರೆ ರಕ್ತ ಕೆಂಪು ಗಣಪತಿಗೆ ಇಷ್ಟದ ಬಣ್ಣ. ಇಷ್ಟಾದರೂ ಗಣಪತಿಯನ್ನು ಪೂಜಿಸುವ ವಿಚಾರವಾಗಿ ಬೇಕಾಗುವ ದೂರ್ವಾಂಕುರ ಹಸಿರು ಬಣ್ಣದ್ದು. 
ಸಾಧಾರಣವಾಗಿ ಯಾವುದೇ ದೇವರುಗಳಿಗೂ ಹಸಿರನ್ನು ನಾವು ಪ್ರಧಾನವಾಗಿ ದೇವರುಗಳ ಇಷ್ಟದ ಬಣ್ಣ ಎನ್ನುವುದನ್ನು ಗಮನಿಸಬಹುದು. ಗರಿಕೆ ಹುಲ್ಲು ತ್ರಿದಳಗಳ ಬಿಲ್ವ ಪತ್ರೆ, ತುಳಸೀದಳ, ಮಾವಿನಸೊಪ್ಪು, ಬಾಳೆ ಎಲೆ, ಹುಣಿಸೆ ಮರದ ಎಲೆ ಚಿಗುರು, ನೆಲ್ಲಿಕಾಯಿ ವೀಳ್ಯದೆಲೆ ಇತ್ಯಾದಿಗಳೆಲ್ಲಾ ಹಸಿರು.. ಕಾಳಿದಾಸನೂ ತನ್ನ ಕುಮಾರ ಸಂಭವದಲ್ಲಿ ಪ್ರಧಾನವಾಗಿ ಪಾರ್ವತಿಯ ಬಗ್ಗೆ ಬರೆಯುವಾಗ ಹಸಿರು ಬಣ್ಣಕ್ಕೇ ಮಹತ್ವ ಕೊಟ್ಟಿದ್ದಾನೆ. 

Advertisement

 ಹಸಿರು ಬಣ್ಣ ಮತ್ತು ಮೇಧಾ ಶಕ್ತಿ
 ಹಸಿರು ಸಾಮಾನ್ಯವಾಗಿ ಬುಧಗ್ರಹವನ್ನು ಪ್ರತಿನಿಧಿಸುತ್ತದೆ. ಬುದ್ಧಿಯನ್ನು ಉದ್ದೀಪಿಸುವ ಬುಧಗ್ರಹದ ಸಲುವಾಗಿ ಪಚ್ಛೆಯನ್ನು ಧರಿಸಬೇಕು ಅಂಬುದಾಗಿ ಭಾರತೀಯ ಜೋತಿಷ್ಯ ಪ್ರತಿಪಾದಿಸುತ್ತದೆ. ಹಸಿರು ಯಾವಾಗಲೂ ಜೀರ್ಣಕ್ರಿಯೆಯನ್ನೂ, ರಕ್ತಶುದ್ಧಿಯನ್ನೂ ವೃದ್ಧಿಸುತ್ತದೆ. ಉತ್ತಮವಾದ ಜೀರ್ಣಕ್ರಿಯೆಯಿಂದಾಗಿ ರಕ್ತಶುದ್ಧಿಯಿಂದಾಗಿ ನಿರೋಗಿಯಾಗಿರಲು ಸಾಧ್ಯ. ಚರ್ಮವ್ಯಾಧಿಯಿರುವ ಜನ ಹಸಿರು ಬಣ್ಣದ ಬಟ್ಟೆಯನ್ನು ಧರಿಸುವುದು ಸೂಕ್ತ. ಜೀವ ಸಂಜೀವಿನಿಯಾಗಿ ಹಸಿರು 
ಯಾವಾಗಲೂ ಮಾನವನ ಜೀವನದಲ್ಲಿ ಬೆಂಬಲಕ್ಕೆ ಬರುತ್ತಲೇ ಇರುತ್ತದೆ. ಬುಧನ ದೌರ್ಬಲ್ಯವನ್ನು ನೀಗಿಸಿಕೊಳ್ಳಲು ಬುಧನಿಂದಲೇ ಒಳಿತುಗಳನ್ನು ಸಂಪಾದಿಸಿಕೊಳ್ಳಬೇಕಾದ ಜನರು ಪಚ್ಛೆಯನ್ನು ಬಲಗೈನ ಕಿರು ಬೆರಳು ಅಥವಾ ನಡುಬೆರಳಿಗೆ ಧರಿಸಿಕೊಳ್ಳುವುದು ಸೂಕ್ತ. ಕೊರಳ ಸರಕ್ಕೆ ಪಚ್ಛೆಯ ಪದಕವನ್ನು ಮಾಡಿಕೊಂಡು ಧರಿಸುವುದೂ ಅನುಕೂಲವೇ. ಆದರೆ ಪಚ್ಛೆಯ ಜೊತೆ ಸೇರಿಸುವ ಲೋಹ ಬಂಗಾರವೇ ಆಗಿರಬೇಕು. ಆದರೆ ಯಾವುದೇ ಕಾರಣಕ್ಕೂ ಪಚ್ಛೆ ಧರಿಸುವುದನ್ನು ಜನ್ಮ ಕುಂಡಲಿಯ 
ಆಧಾರದ ಮೇಲೆಯೇ ತೀರ್ಮಾನಿಸಬೇಕು. ಬುಧನು ಮೇಧಾಶಕ್ತಿ ದಯಪಾಲಿಸುವವನಾದ್ದರಿಂದ 
ಬುಧನ ಶಕ್ತಿಯು ಸೂರ್ಯನ  ಪ್ರಕಾಶಯವಾದ ಬೆಳಕಿನ ತೇಜೋ ಪುಂಜಃ ಬುಧನನ್ನು ಇನ್ನಷ್ಟು ವಿದ್ವತ್ತನ್ನು ದಯಪಾಲಿಸುವ ಶಕ್ತಿಬಿಂದುವಾಗಿ ಪರಿವರ್ತಿಸುತ್ತದೆ. ಆದರೆ ಸೂರ್ಯನಿಗೆ ಹಸಿರಿನ ಬಗೆಗೆ ಒಲವಿಲ್ಲ. ಹಸಿರಿನ ಕುಡಿ ಒಡೆಯಲು ಸೂರ್ಯ ಪ್ರಕಾಶ ಬೇಕು. ಹಾಗಲಕಾಯನ್ನು  ನೇರವಾಗಿ ತಿನ್ನುವುದು ಕಷ್ಟ. ಆದರೆ ಸೂಕ್ತವಾಗಿ ಸಂಸ್ಕರಿಸಿ ಯುಕ್ತವಾದ ಮಸಾಲೆ, ಉಪ್ಪು, ಹುಳಿ ಸೇರಿಸಿದರೆ ಹಾಗಲಕಾಯಿಯ ಬಗ್ಗೆ ಯಾರಿಗೆ ಬಾಯಲ್ಲಿ ನೀರೂರದು? ಗ್ರಹಗಳನ್ನೂ ಹಾಗೆಯೇ ಒಂದೋ ಮಂತ್ರ ಮುಖೇನಾ, ಬಣ್ಣಗಳ ಮುಖೇನ ನಮಗೆ ಉತ್ತಮ ಫ‌ಲ ಒದಗಿಸುವ ಹಾಗೆ ಅವುಗಳ ಶಕ್ತಿಯನ್ನು ಒಳಿತಿಗಾಗಿ ಸಂವೇದನೆ ಪೂರ್ಣವಾಗಿಸಬಹುದು.  ಜನ್ಮಕುಂಡಲಿಯಲ್ಲಿ ಬುಧನು ನಮ್ಮ ಅನನ್ಯವಾದ ಸಿರಿ, ಸಂಪತ್ತು, ಹರ್ಷ ಸಂಭ್ರಮ ಮೇಧಾವಿತನಕ್ಕೆ ಕಾರಣನಾಗುವನಾದರೆ ಹಸಿರು ಬಣ್ಣದ ಒಂದು ಕರವಸ್ತ್ರ ಇಟ್ಟು ಕೊಳ್ಳುವುದು ಸೂಕ್ತ. ಆದರೆ ಇದರಲ್ಲಿ ಮುಖ ಕೈ ವರೆಸಬಾರದು. 

 ಕಪ್ಪುಬಣ್ಣ ಮತ್ತು ಧಾರಣಾ ಶಕ್ತಿಯ ಸಂವರ್ಧನೆ
ಸಪ್ತ ವರ್ಣಗಳು ಸೇರಿ ಬಿಳಿಯ ಬಣ್ಣವಾಗುತ್ತದೆ. ಬಿಳಿಯ ಬಣ್ಣ ಪೃಥಃಕ್ಕರಣಗೊಂಡಾಗ ಸಪ್ತವರ್ಣಗಳು ಹರಡಿಕೊಳ್ಳುತ್ತದೆ. ಕಪ್ಪು ಹಾಗಲ್ಲ. ಯಾವುದೇ ಬಣ್ಣವನ್ನು ತನ್ನಲ್ಲಿ ಹೀರಿ ಬಿಡುತ್ತದೆ. ಅಂದರೆ ಭಾರತೀಯ ಜೋತಿಷ್ಯವಾಗಲಿ ಜಗತ್ತಿನ ಇತರ ಯಾರೇ ಆಗಲಿ ಕಪ್ಪನ್ನು ಒಂದು ಪ್ರತ್ಯೇಕ ಬಣ್ಣವಾಗಿ ಗುರುತಿಸುತ್ತಾರೆ. ಕಪ್ಪು ಯಾವಾಗಲೂ ಅರಿಷ್ಟದ ಸಂಕೇತ ಎಂಬುದಾಗಿ ನಂಬಿಕೆ ಇದೆ. ಪ್ರತಿಯೊಂದಕ್ಕೂ ಒಂದು ಆಕೃತಿಯನ್ನು ಒದಗಿಸುವ ಶೂನ್ಯದ ಸಂಕೇತ. ಶೂನ್ಯವನ್ನು ನೇರವಾಗಿ ಏನೂ ಇರದಿರುವುದು ಎಂಬುದಾಗಿ ನಾವು ಗ್ರಹಿಸಲಾಗದು. ಭಾರತೀಯರು ಶೂನ್ಯವನ್ನು ಗುರುತಿಸಿದ್ದೇ ಇತರ ಎಲ್ಲವನ್ನೂ ಶೂನ್ಯದ ಮೂಲಕ ಹೆಚ್ಚು ಹೆಚ್ಚು ಬೆಲೆ ಪಡೆದುಕೊಳ್ಳಲಿಕ್ಕೆ. ಶೂನ್ಯವೂ ಹಾಗೆ ಅಲ್ಲಿ ಎಲ್ಲವೂ ಇದೆ. ಹೀರಲ್ಪಟ್ಟಿದೆ. ಅದು ನಮಗೆ ಕಾಣುವ ಸ್ವರೂಪದಲ್ಲಿಲ್ಲ. ಬೆಳಕಿನ ಮೂಲಕ ಕತ್ತಲನ್ನು ದೂರ ಮಾಡಬೇಕು. ಹೀಗಾಗಿ ನಿಜವಾದ ನಮ್ಮ ಶಕ್ತಿ ಧಾತುವನ್ನು ವೃದ್ಧಿಗೊಳಿಸಿಕೊಳ್ಳುವ ಕಪ್ಪುಬಣ್ಣದ ಆಶ್ರಯ ಪಡೆಯಬೇಕು. ನಮ್ಮ ವಿಶ್ವದಲ್ಲಿನ ಎಲ್ಲಾ ಆಕಾಶಕಾಯಗಳು ಈ ಕಪ್ಪಿನಲ್ಲಿ ವ್ಯಾಪ್ತಿ ಪಡೆದಿದೆ. ತೇಲಲ್ಪಟ್ಟಿದೆ. ಕಪ್ಪು ಆಶ್ರಯ ಕೊಡದಿದ್ದರೆ ಚಲನೆಗೆ ದಾರಿಯಿಲ್ಲ. ಬೆಳಕಿಗೆ ಆಸ್ತಿತ್ವವಿಲ್ಲ. ಆಸ್ತಿತ್ವವನ್ನು ಕೊಟ್ಟ ಕತ್ತಲ ಕಪ್ಪನ್ನು ಬೆಳಕಿನ ಬಿಳಿ ದೂರ ಮಾಡುತ್ತದೆ. ಜಾnನ ಧ್ಯಾನ ಅರಿವು ಜಪತಪಗಳಿಂದ ಕಪ್ಪಾದ ಅಜಾnನವನ್ನು ಸಂಸ್ಕರಿಸಿ ಜಾnನದ ಕಾಮಧೇನುವನ್ನಾಗಿಸಿಕೊಳ್ಳುತ್ತೇವೆ.  ಕಪ್ಪು ಕರವಸ್ತ್ರವನ್ನು ಇಟ್ಟುಕೊಳ್ಳುವುದು ಹಲವಾರು ರೀತಿಯ ಚಾತುರ್ಯಕ್ಕೆ ತಳಹದಿ ನಿರ್ಮಿಸಿಕೊಡಲು ಅವಕಾಶವಾಗುತ್ತದೆ. ವಿಶೇಷವಾಗಿ ಕಪ್ಪು ಶನೈಶ್ಚರನನ್ನು ಸುಪ್ರೀತಗೊಳಿಸುವ ಸುಲಭ ಸಾಧನ. ಕಪ್ಪುಬಣ್ಣವನ್ನು ಹಲವಾರು ಯಜ್ಞ ಹವನಾದಿ ಶುಭಕಾರ್ಯದಲ್ಲಿ ಸರ್ಪಶಾಂತಿಗೆ ಗಣೇಶನ ಒಲುಮೆಗೆ ಜಗದಂಬೆಯಾದ ಶ್ರೀ ಪಾರ್ವತಿಯ ಶೂಭಾಶೀರ್ವಾದಕ್ಕಾಗಿ ಮಂಡಲಗಳಲ್ಲಿ ಉಪಯೋಗಿಸುತ್ತಾರೆ. ಪಿತ್ರುಪಿತಾಮಹರನ್ನು ಸಂಕೇತಿಸಲೂ ಕೂಡಾ ಕಪ್ಪುಬಣ್ಣವೇ ಸೂಕ್ತವಾಗುತ್ತದೆ. ಇಲ್ಲಿದ್ದ ಅವರು ಅಲ್ಲಿ ಕಪ್ಪು ಹಿನ್ನೆಲೆಯ  ಅಂತರಿಕ್ಷದಲ್ಲಿ ಇದ್ದಾರೆ ಎಂಬುದು ನಮ್ಮ ನಂಬಿಕೆ. ಬರಲಿರುವ ಎಲ್ಲಾ ಪ್ರಳಯಗಳೂ ಬೆಳಕನ್ನು ನುಂಗಿ ಕಪ್ಪನ್ನು ಸೃಷ್ಟಿಸುವ ಕಾರ್ಯ ಮರುಸೃಷ್ಟಿಯಾಗುವ ಅನಿವಾರ್ಯ ಕ್ರಿಯೆ ಎಂಬುದನ್ನು ಭಾರತೀಯರು ಅನಾದಿಯಿಂದ ನಂಬಿದ್ದಾರೆ. ಅನಂತದ ಕಲ್ಪನೆಯಿಂದದು ಸ್ಪಷ್ಟ. ಛಾಯಾಪುತ್ರ ಶನೈಶ್ಚರನು ಸೂರ್ಯ ಹಾಗೂ ಛಾಯೆಯ ಮೂಲಕವಾಗಿ ಹುಟ್ಟಿದವನು ಎಂಬ ಕಥೆ ನಾವು ಕೇಳಿದ್ದೇವೆ. ಹೀಗಾಗಿ ಶನೈಶ್ಚರನು ಕಪ್ಪು ಬಣ್ಣಕ್ಕೆ ಆಕೃತಿ ತಂದುಕೊಡುವ ಅಪೂರ್ವವಾದ ಗ್ರಹ. ಕಪ್ಪು ಬಟ್ಟೆ ಅವನಿಗೆ ಪ್ರಿಯ ಕಾಗೆಯ ಬಣ್ಣ ಕಪ್ಪು. ಅದು ಶನೈಶ್ಚರನ ವಾಹನ. ಕಪ್ಪು ಎಳ್ಳು ಶನೈಶ್ಚರನಿಗೆ ಇಷ್ಟ. ಹಿರಿಯರ ಶ್ರಾದ್ಧ ಕರ್ಮ ಇತ್ಯಾದಿ ಕಾಗೆ ಕಪ್ಪು ಎಳ್ಳು ಮುಖ್ಯವಾದ ಪಾತ್ರ ನಿರ್ವಹಿಸಿ ಕತ್ತಲಿಗೆ ಸರಿದ ಆತ್ಮಗಳನ್ನು ಮತ್ತೆ ಚೇತನಕ್ಕೆ ತರುವ ದಾರಿಯ ಸಾಧನವಾಗುತ್ತದೆ.

 ಬೂದಿ ಬಣ್ಣ ಮತ್ತು ಜೀವದೊಳಗಿನ ಕಾವು
 ಬೂದಿಯ ಬಣ್ಣ ಹೇಗೆಂಬುದನ್ನು ವಿವರಿಸುವುದು ಕಷ್ಟ. ತ್ರಿಮೂರ್ತಿಗಳಲ್ಲಿ ಪ್ರಮುಖನಾದ ಈಶ್ವರನು ದೇಹವನ್ನು ದಹಿಸಿದಾಗ ದೊರೆತ ಬಿಸಿಬೂದಿಯನ್ನು ದೇಹಕ್ಕೆ ಭಸ್ಮವನ್ನಾಧರಿಸಿ ಭಸ್ಮಿàಭೂತನಾದನು. ಶಿವನ ಶೋಭೆಯೇ ವಿಭೂತಿ. ತೀರಾ ಅಸ್ವಸ್ಥವಾದಲ್ಲಿ ಕಾಲುಗಳು ಥಂಡಿ ಹುಟ್ಟಿದಾಗ ಬಿಸಿ ಬೂದಿಯನ್ನು ಅಥವಾ ವಿಭೂತಿಯನ್ನು ಪಾದಗಳಿಗೆ ತಿಕ್ಕುತ್ತಾರೆ. ಜೀವದ ಚಲನೆಗೆ ಬೇಕಾದ ಕಾಂತೀಯ ಶಕ್ತಿ, ವಿದ್ಯುತ್‌ ತರಂಗ ಬೂದಿಯಲ್ಲಿ ಲಭ್ಯ. ಬೂದಿ ಬಣ್ಣ ಯಾವಾಗಲೂ ಮರುಜನ್ಮದ ಕುರಿತಾಗಿನ ಸಂಕೇತ. ಶಿವನು ಜೀವವನ್ನು ಬಿಡುಗಡೆಗೊಳಿಸಿ ತನ್ನೆಡೆಗೆ ಸೆಳೆದುಕೊಳ್ಳುವ ಪರಜೀವದ ಭದ್ರತೆಗಾಗಿನ ಮೃತ್ಯುಂಜಯನೂ ಹೌದು. ವಿಭೂತಿಯಿಂದಾಗಿ ದೇಹ ಒಂದು ಸುಸಂಬದ್ಧ ನೆಲೆಯಲ್ಲಿ ಶಾಖವನ್ನು ಸಂರಕ್ಷಿಸುತ್ತದೆ. ಸಾದಾರಣವಾಗಿ ಬೂದಿಬಣ್ಣದ ಕರವಸ್ತ್ರ ಇಟ್ಟುಕೊಳ್ಳುವುದರಿಂದ ನರಸಂಬಂಧಿ, ರಕ್ತ ಸಂಬಂಧಿ ಅಸಮತೋಲಗಳನ್ನು ನಿವಾರಿಸಿಕೊಳ್ಳಬಹುದು. ಚಂದ್ರನು ಪ್ರಮುಖವಾಗಿ ಅಶ್ವಿ‌ನಿ ಮಖ ಮೂಲಾ ನಕ್ಷತ್ರದಲ್ಲಿ ಇರುವವರು ಬೂದಿಬಣ್ಣದ ಕರವಸ್ತ್ರ ಇಟ್ಟುಕೊಂಡರೆ ಲವಲವಿಕೆ ಉತ್ಸಾಹಗಳಿಗೆ ಸಂವರ್ಧನೆ.   

ಅನಂತ ಶಾಸ್ತ್ರಿ 

Advertisement
Advertisement

Udayavani is now on Telegram. Click here to join our channel and stay updated with the latest news.

Next