Advertisement

ಈಜಿಪುರ:ಯುವತಿಯ ಕತ್ತು ಸೀಳಿ ಬರ್ಬರ ಹತ್ಯೆ; ಸ್ನೇಹಿತೆಯ ಕೃತ್ಯ?

04:47 PM May 24, 2017 | Team Udayavani |

ಬೆಂಗಳೂರು: ಈಜಿಪುರ ರಾಮಮಂದಿರದ ಬಳಿ ಬಾಡಿಗೆ ಮನೆಯೊಂದರಲ್ಲಿ ತಮಿಳುನಾಡು ಮೂಲದ ಯುವತಿಯೊಬ್ಬಳನ್ನು ಬರ್ಬರವಾಗಿ ಕತ್ತು ಸೀಳಿ ಕೊಲೆ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.  

Advertisement

ಪ್ರಿಯಾ (25 ) ಎಂಬಾಕೆ ಹತ್ಯೆಗೀಡಾದ ಯುವತಿಯಾಗಿದ್ದು , 5 ದಿನಗಳ ಹಿಂದಷ್ಟೆ ಸ್ನೇಹಿತೆ ರಿಯಾಳೊಂದಿಗೆ ಬಂದು ಬಾಡಿಗೆ ಮನೆಯಲ್ಲಿ ವಾಸ ಆರಂಭಿಸಿದ್ದಳು ಎಂದು ತಿಳಿದು ಬಂದಿದೆ. 

ಮೂರು ದಿನಗಳ ಹಿಂದೆ ಕೊಲೆ ನಡೆದಿದೆ ಎನ್ನಲಾಗಿದ್ದು, ವಿವೇಕ ನಗರ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. 

ಘಟನೆಯ ಬಳಿಕ ಸ್ನೇಹಿತೆ ರಿಯಾ ನಾಪತ್ತೆಯಾಗಿದ್ದು ಸಂಪರ್ಕಕ್ಕೆ ಸಿಗುತ್ತಿಲ್ಲ. ಆಕೆಯೇ ಕೊಲೆ ನಡೆಸಿ ಪರಾರಿಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next