Advertisement

ಯಂತ್ರಕ್ಕೆ ಸಿಲುಕಿದ ಚೂಡಿದಾರ್‌ ಶಾಲ್‌: ಯುವತಿ ಸಾವು

12:46 AM Feb 13, 2023 | Team Udayavani |

ಮಂಜೇಶ್ವರ: ಹುಟ್ಟು ಹಬ್ಬದ ದಿನದಂದೇ ಚೂಡಿದಾರ್‌ನ ಶಾಲ್‌ ಗ್ರೈಂಡರ್ ಯಂತ್ರಕ್ಕೆ ಸಿಲುಕಿ ಯುವತಿ ಸಾವಿಗೀಡಾದ ಘಟನೆ ಶನಿವಾರ ಮಧ್ಯಾಹ್ನ ಮಂಜೇಶ್ವರದ ತೂಮಿನಾಡಿನಲ್ಲಿ ನಡೆದಿದೆ.

Advertisement

ತೂಮಿನಾಡು ಲಕ್ಷಂವೀಡ್‌ ಕಾಲನಿಯ ರಂಜನ್‌ ಅವರ ಪತ್ನಿ ಜಯಶೀಲಾ (22) ಅವರು ಸಾವಿಗೀಡಾದವರು. ಅವರು ತೂಮಿನಾಡಿನಲ್ಲಿರುವ ಬೇಕರಿಯೊಂದರ ಕಾರ್ಮಿಕೆಯಾಗಿದ್ದು, ಬೇಕರಿ ತಿನಿಸು ತಯಾರಿಸುತ್ತಿದ್ದಾಗ ಗ್ರೈಂಡರ್ ಯಂತ್ರಕ್ಕೆ ಕುತ್ತಿಗೆಯಲ್ಲಿದ್ದ ಚೂಡಿದಾರ್‌ನ ಶಾಲು ಸಿಲುಕಿ ದುರ್ಘ‌ಟನೆ ನಡೆದಿದೆ.

ಶಾಲು ಕುತ್ತಿಗೆ ಬಿಗಿದು ಉಸಿರುಗಟ್ಟಿ ಗಂಭೀರ ಸ್ಥಿತಿಯಲ್ಲಿದ್ದ ಜಯಶೀಲಾ ಅವರನ್ನು ಅಲ್ಲಿದ್ದವರು ಆಸ್ಪತ್ರೆಗೆ ತಲುಪಿಸಿದರೂ ರಕ್ಷಿಸಲು ಸಾಧ್ಯವಾಗಲಿಲ್ಲ. ಶನಿವಾರ ಜಯಶೀಲಾ ಅವರ ಹುಟ್ಟು ಹಬ್ಬವಾಗಿದ್ದು, ಇದರ ನಡುವೆ ಈ ಘಟನೆ ಸಂಭವಿಸಿದೆ. ಒಂದೂವರೆ ವರ್ಷಗಳ ಹಿಂದೆ ಅವರ ವಿವಾಹವಾಗಿತ್ತು.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಂಜೇಶ್ವರ ತಾಲೂಕು ಆಸ್ಪತ್ರೆಯಲ್ಲಿರಿಸಲಾಗಿದೆ.

ಜಯಶೀಲಾ ಅವರು ಮಾಲಿಂಗ-ಸುನಂದಾ ದಂಪತಿ ಪುತ್ರಿಯಾಗಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next