Advertisement

Hassan: ಹಾವಿನ ದ್ವೇಷಕ್ಕೆ ಯುವಕ ಬಲಿ?

11:09 PM Nov 02, 2023 | Team Udayavani |

ಹಾಸನ: ಕೆಲವು ದಿನಗಳ ಹಿಂದೆ ಹೊಳೆನರಸೀಪುರ ತಾಲೂಕು ದೇವರಗುಡ್ಡದಲ್ಲಿ ಹಾವು ಕಡಿತದಿಂದ ಯುವಕ ಮೃತಪಟ್ಟ ಘಟನೆಗೆ ಹೊಸ ತಿರುವು ಸಿಕ್ಕಿದೆ. ತನ್ನನ್ನು ಕೆಣಕಿದವನನ್ನು ಬಲಿ ಪಡೆಯುವ ಮೂಲಕ ನಾಗರಹಾವು ಸೇಡು ತೀರಿಸಿಕೊಂಡಿತೇ ಎಂಬ ಚರ್ಚೆಗಳು ಆರಂಭವಾಗಿವೆ.

Advertisement

ಅ.29ರಂದು ಹಾವು ಕಚ್ಚಿ ಅಭಿಲಾಷ್‌ (30) ಮೃತಪಟ್ಟಿದ್ದರು. ರಾತ್ರಿ ಏಳು ಗಂಟೆ ಹೊತ್ತಿಗೆ ತೋಟದ ಬಳಿ ಗದ್ದೆಗೆ ನೀರು ಹಾಯಿಸಲು ತೆರಳುತ್ತಿದ್ದಾಗ ಹಾವು ಕಚ್ಚಿತ್ತು. ಗುರುವಾರ ಅಭಿಲಾಷ್‌ನ ಮೊಬೈಲ್‌ ಪರಿಶೀಲಿಸಿದಾಗ ಅಭಿಲಾಷ್‌ ಸಾವಿಗೆ ಹಾವಿನ ದ್ವೇಷ ಕಾರಣವೇ ಎಂಬ ಪ್ರಶ್ನೆಯೊಂದು ಮೂಡಿದೆ. ಸಾವಿಗೂ ಮುನ್ನ ಅಭಿಲಾಷ್‌ ಪೈಪ್‌ನಿಂದ ನಾಗರಹಾವನ್ನು ಕೆಣಕಿರುವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ. ನೀರಿನ ಪೈಪ್‌ನಿಂದ ಹಾವನ್ನು ಕೆಣಕುವ ಪ್ರಯತ್ನ ಮಾಡಿ, ಅದನ್ನು ತನ್ನ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದ.

Advertisement

Udayavani is now on Telegram. Click here to join our channel and stay updated with the latest news.

Next