Advertisement

Crime News: ಬೈಕ್‌ನಲ್ಲಿ ಬಂದು ಯುವಕನ ಹತ್ಯೆಗೈದ ದುಷ್ಕರ್ಮಿಗಳು

10:31 AM Sep 23, 2023 | Team Udayavani |

ಬೆಂಗಳೂರು: ಮೂವರು ದುಷ್ಕರ್ಮಿಗಳು ಯುವಕನೊಬ್ಬನನ್ನು ಹತ್ಯೆಗೈದಿ ರುವ ಘಟನೆ ಬಸವನಗುಡಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಬಸವನಗುಡಿ ಖಾಜಿ ಸ್ಟ್ರೀಟ್‌ ನಿವಾಸಿ ಅರ್ಬಾಜ್‌(26) ಕೊಲೆಯಾದವ.ಕೃತ್ಯ ಎಸಗಿದ ಟಿಪ್ಪುನಗರ ನಿವಾಸಿಯಾದ ಮೊಯ್ಸಿನ್‌ ಮತ್ತು ಇತರರಿಗಾಗಿ ಶೋಧ ನಡೆಯುತ್ತಿದೆ.

ಶುಕ್ರವಾರ ಮಧ್ಯಾಹ್ನ 1.30ರ ಸುಮಾರಿಗೆ ಮನೆ ಬಳಿ ನಿಂತಿ ರುವಾಗ ಬೈಕ್‌ನಲ್ಲಿ ಬಂದ ಆರೋಪಿಗಳು ಏಕಾಏಕಿ ಮಾರಕಾಸ್ತ್ರಗಳಿಂದ ಅರ್ಬಾಜ್‌ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಅರ್ಬಾಜ್‌ನನ್ನು ಆಸ್ಪತ್ರೆಗೆ ಕರೆತರುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ.

ದ್ವೇಷದ ಹಿನ್ನೆಲೆಯಲ್ಲಿ ಕೊಲೆ ನಡೆದಿರುವ ಶಂಕೆಯಿದೆ. ಕೊಲೆಯಾದ ಅರ್ಬಾಜ್‌ಗೆ ಅಪರಾಧದ ಹಿನ್ನೆಲೆಯಿದೆ. ಟಿಪ್ಪುನಗರದ ಮೊಯ್ಸಿನ್‌ ಜತೆಗೆ ಅರ್ಬಾಜ್‌ ದ್ವೇಷ ಕಟ್ಟಿಕೊಂಡಿದ್ದ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next