Advertisement

ಗೋಳಿಹೊಳೆ ಗುಣ್ಮಿ ಜಲಪಾತಕ್ಕೆ ಬಿದ್ದು ಯುವಕ ಸಾವು

09:58 PM Jul 28, 2019 | sudhir |

ಶಿರೂರು : ಗೆಳೆಯರೊಂದಿಗೆ ಜಲಪಾತಕ್ಕೆ ತೆರಳಿದ ಸಂದರ್ಭ ಯುವಕ ಆಯತಪ್ಪಿ ಜಲಪಾತಕ್ಕೆ ಬಿದ್ದು ಮೃತಪಟ್ಟ ಘಟನೆ ಗೋಳಿಹೊಳೆ ಗುಣ್ಮಿ ಜಲಪಾತದಲ್ಲಿ ರವಿವಾರ ಸಂಜೆ ಸಂಭವಿಸಿದೆ.

Advertisement

ಮೃತ ವ್ಯಕ್ತಿಯನ್ನು ಕುಂದಾಪುರ ತಾಲೂಕಿನ ಯಡ್ತರೆಯ ಕುಮಾರ ಪೂಜಾರಿ (24) ಎಂದು ತಿಳಿದುಬಂದಿದೆ.

ರವಿವಾರ ಆಗಿದ್ದರಿಂದ ತಮ್ಮ ಗೆಳೆಯರೊಂದಿಗೆ ಗೋಳಿಹೊಳೆ ಗುಣ್ಮಿ ಜಲಪಾತಕ್ಕೆ ತೆರಳಿದ ಸಂದರ್ಭ ಜಲಪಾತಕ್ಕೆ ಕಲ್ಲೊಂದು ಬಿದ್ದ ಪರಿಣಾಮ ಅಲ್ಲೇ ಬದಿಯಲ್ಲಿ ನಿಂತಿದ್ದ ಕುಮಾರ್ ಆಯತಪ್ಪಿ ಜಲಪಾತಕ್ಕೆ ಬಿದ್ದು ಮೃತಪಟ್ಟಿದ್ದಾರೆ.

ಬೈಂದೂರು ಆರಕ್ಷಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next