Advertisement

ಯುವತಿ ವಿಚಾರಕ್ಕೆ ಯುವಕನಿಗೆ ಚಾಕು ಇರಿತ

12:46 PM Aug 28, 2018 | Team Udayavani |

ಬೆಂಗಳೂರು: ಮದ್ಯದ ಅಮಲಿನಲ್ಲಿ ಸ್ನೇಹಿತರೇ ಯುವಕನಿಗೆ ಚಾಕುವಿನಿಂದ ಇರಿದ ಘಟನೆ ನಾಯಂಡಹಳ್ಳಿ ಜಂಕ್ಷನ್‌ ಬಳಿ ಭಾನುವಾರ ತಡರಾತ್ರಿ ನಡೆದಿದೆ. ಗೋರಿಪಾಳ್ಯ ನಿವಾಸಿ ಸಮೀರ್‌ (28) ಚಾಕು ಇರಿತಕ್ಕೊಳಗಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಸಮೀರ್‌ ತನ್ನ 15 ಸ್ನೇಹಿತರ ಜತೆ ಭಾನುವಾರ ರಾತ್ರಿ ಮದ್ಯ ಸೇವಿಸಲು ಹೋಗಿದ್ದ.

Advertisement

ಮದ್ಯದ ಅಮಲಿನಲ್ಲಿ ಯುವತಿ ವಿಚಾರವಾಗಿ ಸ್ನೇಹಿತರ ಜತೆ ವಾಗ್ವಾದ ನಡೆದಿದ್ದು, ಈ ವೇಳೆ ಆತನಿಗೆ ಆರೋಪಿಗಳು ಚಾಕುನಿಂದ ಇರಿದು ಪರಾರಿಯಾಗಿದ್ದಾರೆ. ಆರೋಪಿಗಳ ಬಗ್ಗೆ ಮಾಹಿತಿ ಸಿಕ್ಕಿದ್ದು, ಸದ್ಯದಲ್ಲೇ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಮೆಜೆಸ್ಟಿಕ್‌ನಲ್ಲಿ ಮೊಬೈಲ್‌ ರಿಪೇರಿ ಮಾಡುವ ಸಮೀರ್‌, ಭಾನುವಾರ ರಾತ್ರಿ 10 ಗಂಟೆಗೆ ಲೈವ್‌ಬ್ಯಾಂಡ್‌ ಯುವತಿಯೊಬ್ಬಳನ್ನು ಜಾಲಹಳ್ಳಿ ಠಾಣೆ ವ್ಯಾಪ್ತಿಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದ. ಇದೇ ವೇಳೆ ಈತನ ಇತರೆ ಸ್ನೇಹಿತರು ಸಹ ತಮ್ಮ ಗೆಳತಿಯರನ್ನು ಕರೆ ತಂದಿದ್ದರು.

ಎಲ್ಲರೂ ಕಂಠಪೂರ್ತಿ ಮದ್ಯ ಸೇವಿಸಿದ್ದು, ಮೋಜು-ಮಸ್ತಿ ಮಾಡಿದ್ದಾರೆ. ಬಳಿಕ ನಸುಕಿನ 3.30ರ ಸುಮಾರಿಗೆ ನಾಯಂಡಹಳ್ಳಿ ಜಂಕ್ಷನ್‌ ಬಳಿ ಪೆಟ್ರೋಲ್‌ ಬಂಕ್‌ ಸಮೀಪ ಬಂದ ಯುವಕ-ಯುವತಿಯರು ಕೆಲ ಹೊತ್ತು ಹರಟೆ ಹೊಡೆದಿದ್ದಾರೆ. ಈ ವೇಳೆ ಸಮೀರ್‌ ಕರೆತಂದಿದ್ದ ಯುವತಿ ಜತೆ ಈತನ ಸ್ನೇಹಿತ ಹೆಚ್ಚು ಸಲುಗೆಯಿಂದ ವರ್ತಿಸುತ್ತಿದ್ದ.

ಇದನ್ನು ಆಕ್ಷೇಪಿಸಿದ ಸಮೀರ್‌ ತನ್ನ ಸ್ನೇಹಿತನ ಜತೆ ವಾಗ್ವಾದ ನಡೆಸಿದ್ದಾನೆ. ಈ ವೇಳೆ ಕೋಪಗೊಂಡ ಕೆಲ ಯುವಕರು ಸಮೀರ್‌ ಬೆನ್ನಿಗೆ ಚೂರಿ ಹಾಕಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಬ್ಯಾಟರಾಯನಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next