Advertisement

ಗಾರ್ಮೆಂಟ್ಸ್‌ನಲ್ಲಿ ರಜೆ ನೀಡುತ್ತಿಲ್ಲ ಎಂದು ಯುವತಿ ಆತ್ಮಹತ್ಯೆ

11:41 AM Apr 21, 2023 | Team Udayavani |

ಬೆಂಗಳೂರು: ಗಾರ್ಮೆಂಟ್ಸ್‌ನಲ್ಲಿ ರಜೆ ನೀಡುತ್ತಿಲ್ಲ ಎಂದು ಮನನೊಂದ ಯುವತಿ ಹಾಸ್ಟೆಲ್‌ನ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪೀಣ್ಯ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಬಿಹಾರ ಮೂಲದ ರೀಮಾ ಕುಮಾರಿ (22) ಆತ್ಮಹತ್ಯೆ ಮಾಡಿಕೊಂಡವರು.

ಪಾಟ್ನಾದಲ್ಲಿ ಟೈಲರಿಂಗ್‌ ತರಬೇತಿ ಪಡೆದುಕೊಂಡಿದ್ದ ರೀಮಾ 8 ತಿಂಗಳಿಂದ ಚೊಕ್ಕಸಂದ್ರದಲ್ಲಿ ಗಾರ್ಮೆಂಟ್ಸ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಆದರೆ, ಸರಿಯಾಗಿ ರಜೆ ನೀಡುತ್ತಿರಲಿಲ್ಲ. ಅದರಿಂದ ಬಿಹಾರದಲ್ಲಿರುವ ತನ್ನ ಊರಿಗೂ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಅದರಿಂದ ಮಾನಸಿಕ ಕಿರುಕುಳ ಅನುಭವಿಸುತ್ತಿದ್ದ ರೀಮಾ, ಬುಧ ವಾರ ಬೆಳಗ್ಗೆ ತಾನೂ ವಾಸವಾಗಿದ್ದ ಹಾಸ್ಟೆಲ್‌ನ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ.

ಬಿಹಾರದಿಂದ ಆಕೆಯ ಪೋಷಕರು ನಗರಕ್ಕೆ ಬಂದಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

ತನಿಖೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದರು. ಪೀಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next