Advertisement

ವಿದ್ಯುತ್ ಶಾಕ್ ತಗುಲಿ ಯುವ ರೈತ ಸಾವು

05:01 PM Jul 08, 2021 | Team Udayavani |

ಹುಣಸೂರು : ವಿದ್ಯುತ್ ಶಾಕ್ ತಗುಲಿ ಯುವ ರೈತನೋರ್ವ ಸಾವನ್ನಪ್ಪಿದ ಘಟನೆ ನಾಗರಹೊಳೆ ಕಾಡಂಚಿನ ಮುದಗನೂರು ಗ್ರಾಮದಲ್ಲಿ ನಡೆದಿದೆ. ಕೊಡಗು ಜಿಲ್ಲೆಯ ತಿತಿಮತಿ ಸಮೀಪದ ಕೋಣನಕುಂಟೆ ಗ್ರಾಮದ ಅನೀಶ್ (30) ಮೃತ ದುರ್ದೈವಿ.

Advertisement

ಮೃತ ಅನೀಶ್ ಸೇರಿದಂತೆ ಕೊಡಗು ಜಿಲ್ಲೆಯ ನಾಲ್ಕು ಮಂದಿ ವ್ಯಕ್ತಿಗಳು ಗ್ರಾಮದ ಕೆಂಪೇಗೌಡರ ಜಮೀನಿನನ್ನು ಗುತ್ತಿಗೆ ಪಡೆದು ಬಾಳೆ ಬೆಳೆ ಬೆಳೆದಿದ್ದರು. ಇಂದು ( ಜುಲೈ 08) ಜಮೀನಿನಲ್ಲಿದ್ದ ಬೋರ್ವೆಲ್ ಪಂಪ್ ಸೆಟ್ ಗೆ ವಿದ್ಯುತ್ ಬಾರದ ಕಾರಣ  ಬೆಳಿಗ್ಗೆ ಟ್ರಾನ್ಸ್ಫರ್ ನಲ್ಲಿ ಪ್ಯೂಸ್  ಹಾಕಲುಹೋಗಿದ್ದ ವೇಳೆ ಈ ಅವಘಡ ಸಂಭವಿಸಿದೆ  ಎಂದು ಅಕ್ಕಪಕ್ಕ ಜಮೀನಿನವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next