Advertisement

ಬಾಲಕ ಅಸ್ವಸ್ಥ: ವಿಮಾನ ತುರ್ತು ಭೂಸ್ಪರ್ಶ 

12:11 PM Aug 14, 2018 | Team Udayavani |

ಮಂಗಳೂರು: ಸೋಮವಾರ ಅಬುಧಾಬಿಗೆ ಹೊರಟಿದ್ದ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಬಾಲಕನಿಗೆ ದಿಢೀರನೆ ಅಸೌಖ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಟೇಕ್‌ ಆಫ್‌ ಆದ ಎರಡು ಗಂಟೆಯೊಳಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ವಾಪಸಾಗಿ ತುರ್ತು ಭೂಸ್ಪರ್ಶವಾಗಿದೆ. ಬಾಲಕನನ್ನು ಇಳಿಸಿ ಮತ್ತೆ ಯಾನ ಮುಂದುವರಿಸಲಾಗಿದೆ. 

Advertisement

ಬೆಳಗ್ಗೆ  4.30ಕ್ಕೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ದಿಂದ ಅಬುಧಾಬಿಗೆ ಹೊರಟಿದ್ದ ಜೆಟ್‌ ಏರ್‌ವೆàಸ್‌ ವಿಮಾನದಲ್ಲಿದ್ದ  ಓರ್ವ ಬಾಲಕನಿಗೆ ಅಸೌಖ್ಯ ಕಾಣಿಸಿ ಕೊಂಡಿತ್ತು. ಆಗ ವಿಮಾನವು ಒಂದು ಗಂಟೆ ಅವಧಿಯ ಪ್ರಯಾಣವನ್ನು ಮುಗಿಸಿತ್ತು.  ಪೈಲಟ್‌ ವಿಮಾನವನ್ನು ಕೂಡಲೇ ವಾಪಸ್‌ ಮಂಗಳೂರು ಕಡೆಗೆ ಚಲಾಯಿಸಿದರು.  ಸುಮಾರು  6.30ರ ವೇಳೆಗೆ ವಿಮಾನವು ಮಂಗಳೂರು ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶವಾಯಿತು. 7 ಗಂಟೆ  ಮರು ಪ್ರಯಾಣ ಬೆಳೆಸಿತು. 

ಬಾಲಕನನ್ನು ವಿಮಾನದ ಸಿಬಂದಿ ಆ್ಯಂಬುಲೆನ್ಸ್‌ ಮೂಲಕ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಸ್ವಸ್ಥಗೊಂಡ ಬಾಲಕನ ವಿವರ ಮತ್ತು ಆಸ್ಪತ್ರೆಗೆ ದಾಖಲಾದ ಬಗ್ಗೆ ಮಾಹಿತಿ ಪಡೆಯಲು ಉದಯವಾಣಿ ಪ್ರಯತ್ನಿಸಿದ್ದು, ಯಾವುದೇ ಮಾಹಿತಿ ನೀಡಲು ಜೆಟ್‌ ಏರ್‌ವೆàಸ್‌ ಸಂಸೆœಯ ಅಧಿಕಾರಿಗಳು ನಿರಾಕರಿಸಿದ್ದಾರೆ.  

Advertisement

Udayavani is now on Telegram. Click here to join our channel and stay updated with the latest news.

Next