Advertisement

ಯುವ ನಟ ರಾಕೇಶ್‌ ಅಂತ್ಯಕ್ರಿಯೆ

11:43 AM Oct 04, 2017 | |

ಬೆಂಗಳೂರು: ಅನಾರೋಗ್ಯದಿಂದ ಅಕಾಲಿಕ ಮರಣ ಹೊಂದಿದ ಯುವ ನಟ ರಾಕೇಶ್‌ ಅವರ ಅಂತ್ಯಕ್ರಿಯೆ ಇಂದು ಸುಮನಹಳ್ಳಿಯ ವಿದ್ಯುತ್‌ ಚಿತಾಗಾರದಲ್ಲಿ ನೆರವೇರಿತು. ಅವರ ತಂದೆ, ತಾಯಿ ಸೇರಿದಂತೆ ಅಪಾರ ಬಂಧು ಬಳಗ ಹಾಗು ಸ್ನೇಹಿತರು ಈ ವೇಳೆ ಹಾಜರಿದ್ದರು.

Advertisement

ಗ್ಯಾಂಗ್ರೀನ್‌ ಸಮಸ್ಯೆಯಿಂದ ಬಳಲುತ್ತಿದ್ದ ನಟ ರಾಕೇಶ್‌ ಅವರು ಎರಡು ತಿಂಗಳ ಹಿಂದೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇತ್ತೀಚೆಗೆ ಕೋರಮಂಗಲದ ಸೇಂಟ್‌ ಜಾನ್ಸ್‌ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಚಿಕಿತ್ಸೆ ಫ‌ಲಕಾರಿಯಾಗದೆ ರಾಕೇಶ್‌ ಸೋಮವಾರ ಸಂಜೆ ಮೃತಪಟ್ಟಿದ್ದರು.

ಮಂಗಳವಾರ ಬೆಳಗ್ಗೆ ಮೂಡಲಪಾಳ್ಯದಲ್ಲಿರುವ ಅವರ ನಿವಾಸದ ಬಳಿ ರಾಕೇಶ್‌ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ಪೂಜಾ ವಿಧಿವಿಧಾನ ಬಳಿಕ ಸುಮನಹಳ್ಳಿಯ ಚಿತಾಗಾರದಲ್ಲಿ ಅವರ ಅಂತ್ಯಕ್ರಿಯೆ ನೆರವೇರಿಸಲಾಯಿತು. ಮೂಡಲಪಾಳ್ಯ ನಿವಾಸಿಯಾಗಿದ್ದ ರಾಕೇಶ್‌ ಅವರ ತಾಯಿ ಆಶಾರಾಣಿ ಕೂಡ ನಟಿಯಾಗಿದ್ದರು.

ಎಸ್‌.ನಾರಾಯಣ್‌ ನಿರ್ದೇಶನದ “ಚೆಲುವಿನ ಚಿತ್ತಾರ’ ಸಿನಿಮಾದಲ್ಲಿ ಬಾಲನಟನಾಗಿ ನಟಿಸಿದ್ದ ರಾಕೇಶ್‌ ಬುಲ್ಲಿ ಪಾತ್ರದ ಮೂಲಕ ಗುರುತಿಸಿಕೊಂಡಿದ್ದರು. “ಪಪ್ಪುಸಿ ‘ ಎಂದು ಹೇಳುವ ಡೈಲಾಗ್‌ನಿಂದ ಎಲ್ಲರ ಅಚ್ಚುಮೆಚ್ಚಿನ ನಟ ಎನಿಸಿಕೊಂಡಿದ್ದರು. “ಭಜರಂಗಿ’, “ಬಂಧು ಬಳಗ’, “ಅಭಯ್‌’, “ಅರ್ಜುನ್‌’, “ಬಾಸ್‌’, “ಹುಡುಗರು’, “ಮೊದಲಾ ಸಲ’ ಸೇರಿದಂತೆ ಹಲವು ಚಿತ್ರಗಳಲ್ಲಿ ರಾಕೇಶ್‌ ಅಭಿನಯಿಸಿದ್ದರು. ಇತ್ತೀಚೆಗೆ ಅವರು “ಧೂಮಪಾನ’ ಎಂಬ ಚಿತ್ರದಲ್ಲಿ ನಾಯಕರಾಗಿ ನಟಿಸುತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next