Advertisement

ಪ್ರೀತಿ ಹುಡುಕಿ ಬಂದಿರುವೆ

12:42 AM Oct 01, 2019 | mahesh |

ದುಬಾೖ: ಇತ್ತೀಚೆಗಷ್ಟೇ ಅಬುಧಾಬಿಗೆ ತೆರಳಿ ಇಸ್ಲಾಂಗೆ ಮತಾಂತರವಾಗಿದ್ದ ಕೇರಳದ 19 ವರ್ಷದ ಕ್ರಿಶ್ಚಿಯನ್‌ ಯುವತಿ ಸಿಯಾನಿ ಬೆನ್ನಿ ಈಗ “ನಾನು ಸ್ವಇಚ್ಛೆಯಿಂದ ನನ್ನ ಪ್ರೀತಿಯನ್ನು ಅರಸಿ ಇಲ್ಲಿಗೆ ಬಂದಿದ್ದೇನೆಯೇ ಹೊರತು ಯಾವುದೇ ಉಗ್ರ ಸಂಘಟನೆಗೆ ಸೇರುವುದಕ್ಕಲ್ಲ’ ಎಂದು ಹೇಳಿಕೆ ನೀಡಿದ್ದಾಳೆ. ಈಕೆ ನಾಪತ್ತೆಯಾದ ಹಿನ್ನೆಲೆಯಲ್ಲಿ ಹೆತ್ತವರು ಕೇರಳದಲ್ಲಿ ಪೊಲೀಸರಿಗೆ ದೂರು ನೀಡಿದ್ದರು. ಅಲ್ಲದೆ, ಆಕೆಯನ್ನು ಅಪಹರಣ ಮಾಡಲಾಗಿದ್ದು, ಉಗ್ರ ಸಂಘಟನೆಗೆ ಸೇರ್ಪಡೆ ಮಾಡಲಾಗುತ್ತದೆ ಎಂಬ ವದಂತಿಗಳೂ ಹಬ್ಬಿದ್ದವು. ಈ ಹಿನ್ನೆಲೆ ಸ್ಪಷ್ಟನೆ ನೀಡಿರುವ ಸಿಯಾನಿ, ನಾನು ಪ್ರೀತಿಸುತ್ತಿರುವ ಯುವಕನೊಂದಿಗೆ ವಿವಾಹವಾಗಲೆಂದೇ ನಾನಿಲ್ಲಿಗೆ ಬಂದಿದ್ದೇನೆ. ಉಗ್ರ ನಂಟಿನ ಸುದ್ದಿಯೆಲ್ಲ ಸುಳ್ಳು ಎಂದು ಹೇಳಿರುವುದಾಗಿ ಗಲ್ಫ್ ನ್ಯೂಸ್‌ ವರದಿ ಮಾಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next