Advertisement

ಮನಸ್ಸು ಬದಲಾದ್ರೆ ನಿಂಗೆ ಸಿಗಲ್ಲ…

08:20 PM Jan 27, 2020 | Lakshmi GovindaRaj |

ಅಲ್ಲ ಕಣೋ, ಮನದ ಮಾತುಗಳ ಕೇಳ್ಬೇಕಿತ್ತು ಎಂದು ನಿನಗೆ ಅನಿಸಲಿಲ್ವಾ..? ಒಮ್ಮೆಯಾದ್ರೂ ನಾನು ಮುಂದೆ ಬಂದು ಎಷ್ಟು ಬಾರಿ ಹೇಳಿಕೊಳ್ಳಲಿ..? ಯೋಚಿಸು, ನೀನು ನನಗಾಗಿ ಬದುಕದಿದ್ದರೂ ಪರವಾಗಿಲ್ಲ. ನಿನ್ನ ದಿನಚರಿಯಲ್ಲಿ ನಮಗೆಂದು ಒಂದೈದು ನಿಮಿಷ ಸಮಯ ಇಲ್ಲವೇ..? ನಾವಿಬ್ಬರೂ, ಈಗಿನಗಿಂತಲೂ ತುಂಬಾ ಖುಷಿಯಾಗಿ ಇರಬಹುದಿತ್ತು. ಎಲ್ಲವನ್ನೂ ಕೈಯ್ನಾರೆ ಹಾಳಾಡುತ್ತಾ ಇದೀಯ? ನೆನಪಿಲ್ಲ ನಿನಗೆ ಯಾವುದು ಅಂತ. ತುಂಬಾ ಚೆನ್ನಾಗಿ ಅರ್ಥ ಮಾಡಿಸ್ತಾ ಇದೀಯ? ಯಾಕೋ ಈ ಥರ ಮಾಡ್ತಾ ಇದೀಯ?

Advertisement

ನಮ್ಮದೇ ಪ್ರಪಂಚದಲ್ಲಿ ಪುಟ್ಟ ಗೂಡೊಂದನ್ನು ಕಟ್ಟುತ್ತಾ, ನಾವು ಬದುಕುವ ರೀತಿಯನ್ನು ಕನಸುಗಳಾಗಿ ಹೆಣೆಯುತ್ತಾ, ಹರಟಿದ ಮಾತುಗಳು ಸಾವಿರ ಇವೆ. ಆದರೆ, ಅವೆಂದೂ ನಿನ್ನ ಒಳಮನಸ್ಸನ್ನು ತಲುಪಲೇ ಇಲ್ವಾ ? ನಿನಗಾಗಿಯೇ ಮಿಡಿಯೋ ಹೃದಯ ನನ್ನದು. ನಿನಗಾಗಿಯೇ ಕಾಯುತ್ತಲಿರುವೆ. ನಿನ್ನ ಒಂದು ಮಾತು ಬೇಕು. ಅದು ಮನದಿಂದ ಬಂದ ಮಾತಾಗಿರಬೇಕು. ಫಾರ್ಮಾಲಿಟಿಸ್‌ಗೆ ತುಂಬಾ ಜನ ಸಿಕ್ತಾರೆ. ಕೆಟ್ಟ ಕೋಪ ಬರುತ್ತೆ. ಆ ಔಪಚಾರಿಕತೆಯ ಕಂಡ್ರೆ.. ನಿನಗೇಕೆ ಇದೆಲ್ಲ ಅರ್ಥ ಆಗ್ಲಿಲ್ಲ?

ಬ್ಯುಸಿ ಎಂದು ಮಾತಾಡ್ಬೇಕಾಗುತ್ತೆ ಎಂದು ಹೇಳ್ಳೋ ಮಾತು ಎಂದು ಎಷ್ಟೋ ಸಲ ಅನಿಸಿದೆ ಆದರೂ ಒಪ್ಪಿಕೊಳ್ಳೋಕೆ ಹೃದಯ ತಯಾರಿಲ್ಲ. ಈಗಲೂ ಹೇಳ್ತಾ ಇದೀನಿ. ನಾನು ಹಠ ಸಾಧಿಸೋ ಮುನ್ನ ನನ್ನ ಮನದ ಮಾತುಗಳ ಅರ್ಥಮಾಡ್ಕೊಂಡು ಬಿಡು. ನಾನ್‌ ಒಂಥರಾ ಬದ್ಲಾದ್ರೆ ನಿಂಗ್‌ ದಕ್ಕಲ್ಲ. ತಪ್ಪಿಲ್ಲದೆ ಶಿಕ್ಷಿಸೋ ಮನಸ್ಸಿಲ್ಲ. ನಿನ್ನ ಬಿಟ್ಟಕೊಡೋದು, ಬಿಟ್ಟಿರೋದು ಕಷ್ಟನೇ. ಗಟ್ಟಿ ಮನಸ್ಸು ಮಾಡಿ ನನ್ನಾ ನಾ ಬದಲಾಯಿಸಿಕೊಂಡ್ರೆ ನೀ ಏನು ಮಾಡೋಕೂ ಆಗಲ್ಲ. ಲಾಸ್ಟ್‌ ಚಾನ್ಸ್‌ ಫಾರ್‌ ಯು. ಯೋಚಿಸು, ಜಾಸ್ತಿ ದಿನ ಕಾಯೋವಷ್ಟು ತಾಳ್ಮೆ ಇಲ್ಲ. ಕಾಯ್ದು ಬಸವಳಿಯೋಕೆ ಮನಸೂ ಇಲ್ಲ.

* ವಿದ್ಯಾಶ್ರೀ ಬಿ., ಬಳ್ಳಾರಿ

Advertisement

Udayavani is now on Telegram. Click here to join our channel and stay updated with the latest news.

Next