Advertisement

Solar Boats: ಸೋಲಾರ್‌ದೋಣಿಗಳಿಗೆ ಯೋಗಿ ಚಾಲನೆ

01:00 AM Jan 20, 2024 | Team Udayavani |

ಲಕ್ನೋ: ಅತ್ತ ರಾಮಮಂದಿರ ಉದ್ಘಾಟನೆಗೆ ಸಜ್ಜುಗೊಂಡಿರುವ ಅಯೋಧ್ಯೆಯಲ್ಲಿ ಹಲವು ಅಭಿವೃದ್ಧಿ ಯೋಜನೆಗಳಿಗೂ ವೇಗ ಲಭಿಸಿದ್ದು, ಶುಕ್ರವಾರ ಸಿಎಂ ಯೋಗಿ ಆದಿತ್ಯನಾಥ ಅವರು ಸರಯೂ ಘಾಟ್‌ನಲ್ಲಿ ಸೋಲಾರ್‌ ಆಧಾರಿತ ದೋಣಿಗಳಿಗೆ ಚಾಲನೆ ನೀಡಿದ್ದಾರೆ.

Advertisement

ಉತ್ತರಪ್ರದೇಶ ಸರಕಾರದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಪ್ರಾಧಿಕಾರ (ಯುಪಿಎಎನ್‌ಡಿಆರ್‌ಎ) ಮತ್ತು ಪುಣೆ ಮೂಲದ ದೋಣಿ ತಯಾರಿಕ ಸಂಸ್ಥೆಯ ಸಹಯೋಗದೊಂದಿಗೆ ಈ ದೋಣಿಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಈ ಮೂಲಕ ಭಾರತದಲ್ಲಿ ಇದೇ ಮೊದಲ ಬಾರಿಗೆ ನದಿಗಳಲ್ಲಿ ಸೋಲಾರ್‌ ಬೋಟ್‌ ಅಳವಡಿಕೆಯಾದಂತಾಗಿದೆ. ಸರಯೂ ಬಳಿಕ ವಾರಾಣಸಿಯ ಗಂಗಾ ನದಿಯಲ್ಲೂ ಈ ಬೋಟ್‌ಗಳನ್ನು ಅಳವಡಿಸಲು ಯೋಜಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next