Advertisement

ಕೊಲೆಯಾದ ಕಮಲೇಶ್ ತಿವಾರಿ ಮನೆಗೆ ಇಂದು ಆದಿತ್ಯನಾಥ್ ಯೋಗಿ ಭೇಟಿ

10:54 AM Oct 21, 2019 | keerthan |

ಲಕ್ನೋ: ಇತ್ತೀಚೆಗೆ ಕೊಲೆಯಾದ ಹಿಂದೂ ಸಮಾಜ ಪಾರ್ಟಿಯ ಮುಖಂಡ ಕಮಲೇಶ್ ತಿವಾರಿ ಮನೆಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರವಿವಾರ ಭೇಟಿ ನೀಡಲಿದ್ದಾರೆ.

Advertisement

ಹಿಂದೂ ಸಮಾಜ ಪಾರ್ಟಿಯ ಮುಖಂಡರಾಗಿದ್ದ ಕಮಲೇಶ್ ತಿವಾರಿಯವರನ್ನು ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಯೋಗಿ ಆದಿತ್ಯನಾಥ್ ಭೇಟಿ ನೀಡದೆ ಪತಿಯ ಅಂತ್ಯ ಸಂಸ್ಕಾರ ನಡೆಸುವುದಿಲ್ಲ ಎಂದು ತಿವಾರಿ ಪತ್ನಿ ಆಗ್ರಹ ಮಾಡಿದ್ದರು.

ಆದರೆ ಯೋಗಿ ಆದಿತ್ಯನಾಥ್ ಅವರು ಮಹಾರಾಷ್ಟ್ರ ಚುನಾವಣಾ ಪ್ರಚಾರದಲ್ಲಿದ್ದ ಕಾರಣ ಶನಿವಾರ ತಿವಾರಿ ಮನೆಗೆ ಭೇಟಿ ನೀಡಿರಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next