Advertisement

50 ದಾಟಿದ ಸರಕಾರಿ ನೌಕರರ ಕಡ್ಡಾಯ ನಿವೃತ್ತಿ: ಸಿಎಂ ಯೋಗಿ ಆದೇಶ

03:54 PM Jul 09, 2018 | Team Udayavani |

ಲಕ್ನೋ : 50 ವರ್ಷ ವಯಸ್ಸು ದಾಟಿದ ಸರಕಾರಿ ನೌಕರರು ತಮ್ಮ ಕರ್ತವ್ಯವನ್ನು ನಿರ್ಲಕ್ಷಿಸುವುದು ಕಂಡು ಬಂದಲ್ಲಿ ಅವರಿಗೆ ಕಡ್ಡಾ ನಿವೃತ್ತಿ ನೀಡುವ ಯೋಜನೆಯನ್ನು ಪ್ರಕಟಿಸಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಸರಕಾರದ ಕ್ರಮ ಈಗ ವ್ಯಾಪಕ ಟೀಕೆಗೆ ಗುರಿಯಾಗಿದೆ.

Advertisement

ಸಿಎಂ ಆದಿತ್ಯನಾಥ್‌ ಅವರ ಈ ಕಡ್ಡಾಯ ನಿವೃತ್ತಿ ಆದೇಶಕ್ಕೆ  ಉತ್ತರ ಪ್ರದೇಶದ ಒಟ್ಟು 16 ಲಕ್ಷ ನೌಕರರ ಪೈಕಿ ನಾಲ್ಕು ಲಕ್ಷ ನೌಕರರು ಒಳಪಡುತ್ತಾರೆ.

ಇದೇ ಜು.31ರೊಳಗೆ ಆಯಾ ಇಲಾಖೆಯ ಮುಖ್ಯಸ್ಥರು 50 ದಾಟಿದ ನೌಕರರ ಕಾರ್ಯ ನಿರ್ವಹಣೆ, ಸೇವಾ ತತ್ಪರತೆ, ಕ್ಷಮತೆ, ಕರ್ತವ್ಯ ಬದ್ಧತೆಯೇ ಮೊದಲಾದವುಗಳ ಬಗ್ಗೆ ವಿಸ್ತೃತ ವರದಿಯನ್ನು ಸಲ್ಲಿಸಬೇಕಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next