Advertisement

“ಹುಚ್ಚಾಸ್ಪತ್ರೆಯಿಂದ ಬಂದಿರುವ ಯೋಗೇಶ್ವರ್‌’ : ಸಂಸದ ಡಿ.ಕೆ.ಸುರೇಶ್‌ ವ್ಯಂಗ್ಯ

11:43 AM Jul 31, 2020 | mahesh |

ಬೆಂಗಳೂರು: ವಿಧಾನ ಪರಿಷತ್‌ ಸದಸ್ಯ ಸಿ.ಪಿ. ಯೋಗೇಶ್ವರ್‌ ಬಾಯಿಚಪಲಕ್ಕೆ ಮಾತನಾಡುತ್ತಿರುವುದನ್ನು ನೋಡಿದರೆ ಮಾನಸಿಕ ಅಸ್ವಸ್ಥರಾಗಿರುವುದು ಸ್ಪಷ್ಟವಾಗುತ್ತಿದೆ.
ಬಿಜೆಪಿಯವರು ಹುಚ್ಚಾಸ್ಪತ್ರೆಯಿಂದ ನೇರವಾಗಿ ವಿಧಾನ ಪರಿಷತ್ತಿಗೆ ಕರೆದುಕೊಂಡು ಬಂದಿದ್ದಾರೆ ಎಂದು ಸಂಸದ ಡಿ.ಕೆ.ಸುರೇಶ್‌ ವ್ಯಂಗ್ಯವಾಡಿದ್ದಾರೆ.

Advertisement

ತಮ್ಮ ಸಹೋದರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ವಿರುದ್ಧ ಮಾಡಿರುವ ಆರೋಪಕ್ಕೆ ಸುದ್ದಿಗೋಷ್ಠಿಯಲ್ಲಿ ಪ್ರತ್ಯುತ್ತರ ನೀಡಿ, ನಂಬಿದವರಿಗೆ ಮೋಸ ಮಾಡುವ ಬುದ್ಧಿ ಇರುವ ಯೋಗೇಶ್ವರ್‌ ಮೇಲ್ಮನೆಗೆ ನೂತನವಾಗಿ ಸದಸ್ಯರಾಗಿದ್ದಾರೆ. ಈಗಲಾದರೂ ಭಗವಂತ ಅವರಿಗೆ ಒಳ್ಳೆಯದನ್ನು ಮಾಡಲಿ, ಯೋಗೇಶ್ವರ್‌ ತಮಗೆ ನೀಡಿರುವ ಸ್ಥಾನಕ್ಕೆ ಗೌರವ ಕೊಟ್ಟು ಕೆಲಸ ಮಾಡಲಿ ಎಂದು ಹೇಳಿದರು.

ಯೋಗೇಶ್ವರ್‌ ನಾಲಿಗೆ ಬಿಗಿ ಹಿಡಿದು ಮಾತಾಡಬೇಕು. ಯೋಗೇಶ್ವರ್‌ ಚಡ್ಡಿ ಹಾಕಿಕೊಂಡು ಕೆಲಸ ಮಾಡುತ್ತಾರೆಯೋ, ಏನು ಹಾಕಿಕೊಂಡು ಕೆಲಸ ಮಾಡುತ್ತಾರೆಯೋ ಗೊತ್ತಿಲ್ಲ. ನಾವು ಹಗಲು ರಾತ್ರಿ ಒಂದೇ ಕೆಲಸ ಮಾಡುತ್ತೇವೆ. ಅವರು ರಾತ್ರಿ ಹಲವಾರು ನಾಯಕರ ಮನೆಗೆ ಹೋಗಿ ಕಾಲು ತಟ್ಟುತ್ತಿದ್ದಾರೆ. ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡಬೇಕು ಎಂದು ಅವರ ನಾಯಕರೇ ಓಡಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು. ಕುಮಾರಸ್ವಾಮಿ ಕಾಂಗ್ರೆಸ್‌ ಬಗ್ಗೆ ಏನು ಮಾತನಾಡಿದ್ದಾರೆ ಎನ್ನುವುದು ಗೊತ್ತಿಲ್ಲ. ಆದರೆ, ಅವರ ಬಗ್ಗೆ ಗೌರವವಿದೆ. ನಮಗೆ ಪಿತೂರಿ ರಾಜಕಾರಣ ಗೊತ್ತಿಲ್ಲ. ನಮ್ಮದು ಅಭಿವೃದ್ಧಿಯ ರಾಜಕಾರಣ ಮಾತ್ರ ಎಂದರು.

ಡಿ.ಕೆ ಶಿವಕುಮಾರ್‌ ಎಂದಿಗೂ ನೇರವಾಗಿ ಮಾತನಾಡುತ್ತಾರೆ. ಆದರೆ, ಯೋಗೇಶ್ವರ್‌ ಇಷ್ಟು ದಿನ ಬಣ್ಣ ಹಚ್ಚಿಕೊಂಡು ನಾಟಕ ಮಾಡುತ್ತಿದ್ದರು. ಈಗ ರಾಜಕೀಯವಾಗಿ ನಾಟಕವಾಡುತ್ತಿದ್ದಾರೆ. ಯೋಗೇಶ್ವರ್‌ ಯೋಗ್ಯತೆ ಏನು ಎಂಬುದು ಎಲ್ಲರಿಗೂ ತಿಳಿದಿದೆ. ಡಿ.ಕೆ.ಶಿವಕುಮಾರ್‌ ಎಂದಿಗೂ ಜಾತಿ ರಾಜಕೀಯ ಮಾಡಿಲ್ಲ. ಎಲ್ಲಾ ಜಾತಿ ಧರ್ಮವನ್ನು ಒಟ್ಟಿಗೆ ತೆಗೆದುಕೊಂಡು ಕೆಲಸ
ಮಾಡುತ್ತಿದ್ದೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next