Advertisement

ಯೋಗ ನಡಿಗೆ : ಸಕಾರಾತ್ಮಕ ಚಿಂತನೆಗಳಿಂದ ಮನಸ್ಸು ಒತ್ತಡಮುಕ್ತ

02:34 AM Jun 14, 2021 | Team Udayavani |

ನಾವು ಮುಂಜಾನೆ ಅಥವಾ ಸಂಜೆ ವೇಳೆ ಏನನ್ನಾದರೂ ಯೋಚನೆ ಮಾಡಿಕೊಂಡು ವಾಕಿಂಗ್‌ ಮಾಡುತ್ತೇವೆ. ಇದರಿಂದ ದೇಹ ಮತ್ತು ಮನಸ್ಸಿಗೆ ವಿಶ್ರಾಂತಿ ಸಿಗುವುದರ ಬದಲಿಗೆ ಹೆಚ್ಚಿನ ಒತ್ತಡ ಬೀಳುತ್ತದೆ. ದೇಹ ಮತ್ತು ಮನಸ್ಸನ್ನು ಶಾಂತವಾಗಿರಿಸುವ ಉದ್ದೇಶದೊಂದಿಗೆ ಇತ್ತೀಚಿನ ದಿನಗಳಲ್ಲಿ ಯೋಗ ನಡಿಗೆ ಹೆಚ್ಚು ಪ್ರಚಲಿತದಲ್ಲಿದೆ. ದೇಹ, ಉಸಿರು, ಮನಸ್ಸಿನ ಸಂಯೋಜನೆಯೇ ಯೋಗ. ಉಸಿರಾಟದ ಮೇಲೆ ಹೆಚ್ಚು ಗಮನಕೊಟ್ಟು ಮನಸ್ಸಿನ ಮೇಲಾಗುವ ಒತ್ತಡವನ್ನು ತಗ್ಗಿಸಲು ಮಾಡುವ ವ್ಯಾಯಾಮವೇ ಯೋಗ ನಡಿಗೆ.

Advertisement

ತಂಪಾದ ಮತ್ತು ಶಾಂತವಾದ ಸಮಯದಲ್ಲಿ ಯೋಗ ನಡಿಗೆ ಮಾಡುವುದು ಉತ್ತಮ. ನಡಿಗೆಯ ಮೂಲಕ ಮನಸ್ಸಿನ ಗಮನವನ್ನು ದೇಹದ ಮೇಲೆ ಇರಿಸಿ ದೇಹ ದೊಂದಿಗೆ ನಾವು ಸಂಪರ್ಕ ಹೊಂದಲು ಸಾಧ್ಯವಾಗುತ್ತದೆ. ಉಸಿ ರಾಟವನ್ನು ನಮ್ಮ ಕಾಲುಗಳ ಚಲನೆಯ ಮೇಲೆ ಜೋಡಿಸುವು ದರಿಂದ ಮನಸ್ಸು ಶಾಂತ ಸ್ಥಿತಿಗೆ ತಲುಪಲು ಪ್ರೇರಣೆಯಾಗುತ್ತದೆ. ಇದರಿಂದ ಆಲೋಚನೆಗಳು, ಚಿಂತೆಗಳು, ನಕಾ ರಾತ್ಮಕತೆಯು ದೂರವಾಗಿ ನಾವು ಒತ್ತಡಮುಕ್ತ ರಾಗಲು ಸಾಧ್ಯ. ನಿಯಮಿತವಾಗಿ ಯೋಗ ನಡಿಗೆ ಯನ್ನು ಅಭ್ಯಾಸ ಮಾಡಿದರೆ ದೇಹದ ತೂಕ ಇಳಿ ಯುತ್ತದೆ, ರೋಗಗಳು ಬಾಧಿಸುವ ಸಾಧ್ಯತೆಗಳು ಕಡಿಮೆಯಾಗುತ್ತವೆ.ಯೋಗದ ಮುಖ್ಯ ಉದ್ದೇಶವೇ ಚಿತ್ತವೃತ್ತಿ ಯನ್ನು ಕಡಿಮೆ ಮಾಡುವುದು. ಯೋಗ ನಡಿಗೆಯಿಂದ ದೇಹದ ಎಲ್ಲ ಚಟುವಟಿಕೆಗಳನ್ನೂ ಸರಿ ಯಾಗಿರಿಸಲು ಸಾಧ್ಯವಾಗುತ್ತದೆ. ಕೆಲವರು ವಾಕಿಂಗ್‌ ಮಾಡಿದ ಮೇಲೆ ಏದುಸಿರು ಬಿಡುತ್ತಾರೆ. ಇದು ಹೃದಯದ ಕಾರ್ಯದಲ್ಲಾಗಿ ರುವ ವ್ಯತ್ಯಾಸದ ಸೂಚಕವಾಗಿದೆ. ವಾಕಿಂಗ್‌ ಮಾಡಿದ ಮೇಲೂ ಹೃದಯದ ಕಾರ್ಯ ಸ್ಥಿರವಾಗಿರಬೇಕಾದರೆ ಮನ ಸ್ಸನ್ನು ಶಾಂತವಾಗಿರಿಸುವುದು ಬಹುಮುಖ್ಯವಾಗು ತ್ತದೆ. ಯೋಗ ನಡಿಗೆಯಿಂದ ಹೃದಯ, ಶ್ವಾಸಕೋ ಶದ ದಕ್ಷತೆ ಹೆಚ್ಚಾಗುತ್ತದೆ. ಮನಸ್ಸು ಸಂಪೂರ್ಣ ಶಾಂತವಾಗಿ ಯೋಗಾಭ್ಯಾಸಕ್ಕೆ ಪೂರಕವಾಗುತ್ತದೆ.

ಆರೋಗ್ಯದ ಗುಟ್ಟು
ಇತ್ತೀಚಿನ ದಿನಗಳಲ್ಲಿ ಆರೋಗ್ಯವಾಗಿರಬೇಕು, ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸಿಕೊಳ್ಳ ಬೇಕು ಎಂಬುದು ಎಲ್ಲರ ಧ್ಯೇಯವಾಗಿ ಬಿಟ್ಟಿದೆ. ಇದಕ್ಕಾಗಿ ನಾವು ಮೂರು ಮುಖ್ಯ ವಿಷಯಗಳನ್ನು ಅರಿತಿರಬೇಕು. 1- ಅಷ್ಟಾಂಗದಲ್ಲಿ ಶೌಚಾದಿಕ್ರಿಯೆ ಗಳನ್ನು ಪಾಲಿಸಬೇಕು. 2- ಮನಸ್ಸು ಶಾಂತವಾಗಿ ರಬೇಕು. 3- ದೇಹದ ಅಂಗಾಂಗಗಳ ದಕ್ಷತೆಯನ್ನು ಹೆಚ್ಚಿಸಿಕೊಳ್ಳಬೇಕು. ನಮ್ಮಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗಲು ಮುಖ್ಯ ಕಾರಣವೇ ಜೀರ್ಣ ಕ್ರಿಯೆಯಲ್ಲಿನ ಸಮಸ್ಯೆ. ಯೋಗ ನಡಿಗೆ, ಆಸನ, ಪ್ರಾಣಾಯಾಮದ ಮೂಲಕ ಇದನ್ನು ಸುಸ್ಥಿತಿಯ ಲ್ಲಿಟ್ಟು ಕೊಳ್ಳಬಹುದು. ಯೋಗ ನಡಿಗೆಯು ದೇಹದ ಅಂಗಾಂಗಗಳ ದಕ್ಷತೆಯನ್ನು ಹೆಚ್ಚಿಸುತ್ತದೆ. ಇದರಿಂದ ಉಳಿದ ಕ್ರಿಯೆಗಳೂ ಉತ್ತಮವಾಗಿರುತ್ತವೆ. ಶ್ವಾಸಕೋಶದ ಸಾಮರ್ಥ್ಯ ಕುಗ್ಗಿದಾಗ ಕಫ‌, ಜ್ವರ, ನೆಗಡಿ ಸೇರಿದಂತೆ ಕೆಲವೊಂದು ಸಮಸ್ಯೆಗಳು ಕಾಣಿಸಿ ಕೊಳ್ಳುತ್ತವೆ. ಇದಕ್ಕೆ ಮುಖ್ಯ ಕಾರಣ ನಮ್ಮ ಎರಡೂ ಮೂಗಿನ ಹೊಳ್ಳೆಗಳಿಂದ ಉಸಿರಾಟ ಪ್ರಕ್ರಿಯೆ ಸರಿಯಾಗಿ ಆಗದೇ ಇರುವುದು. ಇದನ್ನು ಅನುಲೋಮ, ವಿಲೋಮ, ಉಜ್ರಾಯಿ, ಭಾÅಮರಿ ಪ್ರಾಣಾಯಾಮದ ಮೂಲಕ ಸರಿಪಡಿಸಿಕೊಳ್ಳ ಬಹುದು. ಜತೆಗೆ ಧ್ಯಾನ ಮಾಡುವುದರಿಂದಲೂ ಸ್ವಯಂ ಜಾಗೃತಿ ಉಂಟಾಗಿ ಮನಸ್ಸನ್ನು ಶಾಂತವಾ ಗಿರಿಸಿಕೊಳ್ಳಲು ಸಾಧ್ಯವಿದೆ.

ಪ್ರತಿ ಸಾರ ನಡಿಗೆ (ಹಿಂದಕ್ಕೆ ನಡೆಯುವುದು)
ಯೋಗ ನಡಿಗೆಯಲ್ಲಿ ಇದು ಬರುವುದಿಲ್ಲ. ಇದು ಇತ್ತೀಚಿನ ಕಲ್ಪನೆಯಷ್ಟೇ. ಇದರ ಪ್ರಯೋಜನ ಒಂದೇ ರೀತಿ ಆಗಿರುತ್ತದೆ. ವ್ಯಾಯಾಮದಲ್ಲಾಗುವ ಬೇಸರವನ್ನು ತಪ್ಪಿಸಲು ಇಂಥ ಪ್ರಯೋಗಗಳನ್ನು ನಡೆಸಲಾಗುತ್ತಿದೆ. ಇದು ನಿಧಾನ ನಡಿಗೆಯಾದ್ದರಿಂದ ದೇಹ ಮತ್ತು ಮನಸ್ಸಿನ ವಿಶ್ರಾಂತಿಗೆ ಪ್ರಯೋಜನಕಾರಿಯಾಗಿದೆ ಮಾತ್ರವಲ್ಲದೆ ಉತ್ತಮ ನಿದ್ರೆಗೂ ಸಹಕಾರಿ. ದೇಹ ಮತ್ತು ಮನಸ್ಸಿನ ಸಮತೋಲನ ಸಾಧಿಸಲು, ಚಯಾಪಚಯ ಕ್ರಿಯೆಯನ್ನು ಸುಧಾರಿಸಲು ಇದು ಪೂರಕ.

ಪ್ರಾರಂಭದಲ್ಲಿ ಆಳವಾದ ಉಸಿರನ್ನು ತೆಗೆದು ಕೊಂಡು ನಿಧಾನಗತಿಯಲ್ಲಿ ನಡೆಯಲು ಪ್ರಾರಂಭಿಸಿ. ಇದರಿಂದ ಮನಸ್ಸು ಶಾಂತಗೊ ಳ್ಳಲು ಆರಂಭಗೊಳ್ಳುತ್ತದೆ. ಹೆಜ್ಜೆಯು ಲಯ ಬದ್ಧವಾಗಿ ಭೂಮಿಯೊಂದಿಗೆ ಹೇಗೆ ಸಂಪರ್ಕ ಸಾಧಿಸುತ್ತದೆ ಎಂಬುದನ್ನು ಗಮನಿಸಿ. ನಡೆಯುವಾಗ ಭುಜ, ಸೊಂಟದ ವ್ಯಾಯಾಮವೂ ಆಗುವುದರಿಂದ ಭುಜ, ಕುತ್ತಿಗೆ, ಬೆನ್ನು, ಸೊಂಟದ ಭಾಗಗಳಲ್ಲಿರುವ ಒತ್ತಡಗಳು ನಿವಾರಣೆಯಾಗುತ್ತವೆ. ಇನ್ನು ನಡೆಯುತ್ತಿ ರುವಾಗ ಪ್ರಕೃತಿಯ ವಿವಿಧ ಬಣ್ಣಗಳನ್ನು ನೋಡುವುದರಿಂದ ಮನಸ್ಸು ಶಾಂತವಾಗುತ್ತದೆ. ಒಂದು ವೇಳೆ ಈ ನಡುವೆ ಮನಸ್ಸು ಬೇರೆಡೆಗೆ ಸೆಳೆಯುತ್ತಿದ್ದರೆ ಆಳವಾದ 3- 4 ದೀರ್ಘ‌ ಉಸಿರು ಬಿಟ್ಟು, ತೆಗೆದುಕೊಳ್ಳುವು ದರಿಂದ ಮನಸ್ಸನ್ನು ಮತ್ತೆ ನಮ್ಮ ನಡಿಗೆಯ ಮೇಲೆ ಕೇಂದ್ರೀಕರಿಸಬಹುದು. ಒಟ್ಟಿನಲ್ಲಿ ಯೋಗ ನಡಿಗೆ ಎಂದರೆ ನಿಮಗೆ ಯಾವುದು ಇಷ್ಟವೋ ಅದನ್ನು ಮಾಡುವುದು. ಈ ಮೂಲಕ ಮನಸ್ಸನ್ನು ಸಕಾರಾತ್ಮಕ ಚಿಂತನೆಗೆ ಪ್ರೇರೇಪಿಸುವುದಾಗಿದೆ.

Advertisement

– ಕುಶಾಲಪ್ಪ ಗೌಡ ಎನ್‌., ಯೋಗ ಚಿಕಿತ್ಸಕ, ಆವಿಷ್ಕಾರ ಯೋಗ/ ಯೋಗ ವಿಜ್ಞಾನ ಜೂನಿಯರ್‌ ರಿಸರ್ಚ್‌ ಫೆಲೋ, ಯೇನಪೊಯ ಡೀಮ್ಡ್ ಯುನಿವರ್ಸಿಟಿ, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next