Advertisement

ಎತ್ತಿನಹೊಳೆ: ಮೇ 27ರೊಳಗೆ ತೀರ್ಪು

01:58 AM May 16, 2019 | Team Udayavani |

ಮಂಗಳೂರು: ದಿಲ್ಲಿಯ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದಲ್ಲಿ ಎತ್ತಿನಹೊಳೆ ಯೋಜನೆ ವಿರುದ್ಧ ಇಬ್ಬರು ಪರಿಸರವಾದಿಗಳು ದಾಖಲಿಸಿರುವ ಎರಡು ಪ್ರತ್ಯೇಕ ಪ್ರಕರಣಗಳ ಕುರಿತ ಅಂತಿಮ ತೀರ್ಪು ಮೇ 27ರ ಒಳಗಾಗಿ ಹೊರಬೀಳಲಿದೆ.

Advertisement

ಎತ್ತಿನಹೊಳೆ ಕಾಮಗಾರಿಗೆ ಸಂಬಂಧಿಸಿದಂತೆ ಅರಣ್ಯ ತೆರವಿಗೆ ಅವಕಾಶ ನೀಡಿರುವುದನ್ನು ಹಸಿರು ನ್ಯಾಯಾಧೀಕರಣದ ಮುಂದೆ ಕೆ.ಎನ್‌. ಸೋಮಶೇಖರ್‌ ಪ್ರಶ್ನಿಸಿದ್ದರು. ಅರ್ಜಿಯ ಬಗ್ಗೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ಪ್ರಧಾನ ನ್ಯಾಯಮೂರ್ತಿಗಳು ಸೋಮವಾರದಂದು (ಮೇ 13) ವಾದ ಆಲಿಸಿ ತೀರ್ಪು ಕಾಯ್ದಿರಿಸಿದ್ದರು. ಇದೀಗ ಮೇ 27ರ ಒಳಗಾಗಿ ಈ ಪ್ರಕರಣದತೀರ್ಪು ಹೊರಬೀಳಲಿದೆ.

ಸಕಲೇಶಪುರದ ವಕೀಲ ಕಿಶೋರ್‌ ಕುಮಾರ್‌ ದಾಖಲಿಸಿರುವ 2014 ವಿಳಂಬಿತ ಪ್ರಕರಣದ ವಾದ ಪ್ರತಿವಾದಗಳೂ ಸೋಮವಾರ ನಡೆದವು. ಆದೇಶವನ್ನು ಕಾದಿರಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next